ಕ್ರೈಂವೈರಲ್ ನ್ಯೂಸ್

ಇನ್ನೈದು ನಿಮಿಷ ತಡವಾಗಿದ್ದರೆ ಆ ಮಗು ಮಣ್ಣಿನಲ್ಲಿ ಮಣ್ಣಾಗುತ್ತಿತ್ತು..! ವೈದ್ಯರೇ ಮೃತಪಟ್ಟಿರುವುದಾಗಿ ಘೋಷಿಸಿದ 1.5 ವರ್ಷದ ಮಗು ಅಂತ್ಯಕ್ರಿಯೆಯ ವೇಳೆ ಬದುಕಿದ್ದು ಹೇಗೆ?

186

ನ್ಯೂಸ್ ನಾಟೌಟ್: ಅಂತ್ಯಕ್ರಿಯೆ ವಿಧಿವಿಧಾನಗಳು ನಡೆದು ಇನ್ನೇನು ಮಣ್ಣು ಮಾಡಬೇಕು ಎನ್ನುವ ಐದು ನಿಮಿಷ ಮುಂಚೆ ಮಗು ಉಸಿರಾಡಿದೆ. ಇದನ್ನು ಕಂಡು ಪೋಷಕರಿಗೂ ಸಂತಸಗೊಂಡಿದ್ದು, ಅಂತ್ಯಕ್ರಿಯೆಗೆ ಬಂದವರಿಗೂ ಅಚ್ಚರಿಯಾಗಿತ್ತು.

ಹೃದಯ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ವೈದ್ಯರೇ ಘೋಷಿಸಿದ ಮಗು ಅಂತ್ಯಕ್ರಿಯೆ ವೇಳೆ ಬದುಕುಳಿದಿದೆ. ಇನ್ನೈದು ನಿಮಿಷ ತಡವಾಗಿದ್ದರೆ ಆಗಿದ್ದರೆ ಆ ಮಗು ಮಣ್ಣಿನಲ್ಲಿ ಮಣ್ಣಾಗುತ್ತಿತ್ತು. ಈ ಘಟನೆ ನಡೆದಿರುವುದು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಬಸಾಪುರದಲ್ಲಿ ನಡೆದಿದೆ.

ಬಸಾಪೂರ ಗ್ರಾಮದ ಬಸವರಾಜ ಪೂಜಾರ ಎಂಬುವವರ ಒಂದೂವರೆ ವರ್ಷದ ಮಗು ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಗುರುವಾರ ಮಗುವಿನ ಅನಾರೋಗ್ಯದಲ್ಲಿ ತೀವ್ರ ಏರಿಳಿತವಾಗಿತ್ತು. ‘ಮಗುವಿನ ಹೃದಯ ಬಡಿತ ನಿಂತಿದೆ. ಮಗು ಬದುಕುಳಿದಿಲ್ಲ’ ಎಂದು ಹುಬ್ಬಳ್ಳಿ ಕಿಮ್ಸ್ ವೈದ್ಯರು ಹೇಳಿದ್ದರು.

ಮಗು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ ನಂತರ ಸಂಬಂಧಿಕರು ಬಸಾಪೂರ ಮಗುವಿನ ಅಂತ್ಯಕ್ರಿಯೆ ಮುಂದಾಗಿದ್ದರು. ಈ ವೇಳೆ ಸಂಪ್ರದಾಯದಂತೆ ಮಗುವಿನ ಬಾಯಿಗೆ ಹೆತ್ತವರು ನೀರು ಹಾಕುವಾಗ ಮಗು ತಕ್ಷಣವೇ ಉಸಿರಾಟ ಆರಂಭಿಸಿ, ಕೈಕಾಲು ಬಡಿದುಕೊಂಡಿದೆ. ಮಗು ಉಸಿರಾಡಿಸುತ್ತಿರುವುದು ಕಂಡ ಸಂಬಂಧಿಕರು ಹಾಗೂ ಪಾಲಕರಿಗೆ ಒಂದು ಕ್ಷಣ ಆಶ್ಚಕರವಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಗು ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಮೊದಲು ಗದಗ-ಬೆಟಗೇರಿ ನಗರದ ಜರ್ಮನ್ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಹಿನ್ನೆಲೆ ಪಾಲಕರು ನಂತರ ಧಾರವಾಡ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದರು. ಬಡತನ ಕುಟುಂಬದ ಬಸವರಾಜ ಪೂಜಾರ ಮಗುವಿನ ಆರೈಕೆ ಹಾಗೂ ಆರೋಗ್ಯ ಸುಧಾರಣೆಗೆ ಅಧಿಕ ವೆಚ್ಚ ಖರ್ಚಾಗುವ ಕಾರಣಕ್ಕೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕೈದು ದಿನಗಳಿಂದ ವೈದ್ಯರು ಮಗುವಿನ ಆರೈಕೆ ಮಾಡಿದ್ದರು. ಗುರುವಾರ ಸಂಜೆ ನಿಮ್ಮ ಮಗುವಿನ ಹೃದಯ ಬಡಿತ ಕಡಿಮೆ ಪ್ರಮಾಣದಲ್ಲಿದೆ, ಮಗು ಆಕ್ಸಿಜನ್ ಮೇಲೆ ಬದುಕಿಳಿದೆ. ಆಕ್ಸಿಜನ್ ತೆಗೆದರೆ ಜೀವ ಉಳಿಯುವುದಿಲ್ಲ ಎಂದು ಪಾಲಕರಿಗೆ ವೈದ್ಯರು ತಿಳಿಸಿದ್ದರು. ಅಲ್ಲದೇ ಗುರುವಾರ ಸಂಜೆ 7.3೦ರ ವೇಳೆಗೆ ಮಗು ಮೃತಪಟ್ಟಿದೆ ಎಂದು ಹೇಳಿ ಪಾಲಕರಿಂದ ಸಹಿ ಪಡೆದು ಮಗುವಿನ ದೇಹವನ್ನು ಹಸ್ತಾಂತರ ಮಾಡಿದ್ದರು ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಈ ವೇಳೆ ಗ್ರಾಮಕ್ಕೆ ತಂದು ಅಂತ್ಯಕ್ರೀಯೆ ನಡೆಸುವ ವೇಳೆ ಬಾಯಿಗೆ ನೀರು ಬಿಟ್ಟಾಗ ಮಗು ಎಚ್ಚರಗೊಂಡಂತೆ ಆಗಿ ಕೈಕಾಲು ಬಡಿದುಕೊಂಡಿದೆ. ಮಗು ಮರುಜೀವ ಪಡೆದದ್ದು ಮಾತ್ರವಲ್ಲ ಹೆತ್ತವರಿಗೂ ಈ ಘಟನೆಯಿಂದ ಮರುಜೀವ ಪಡೆದಂತಾಗಿದೆ.

See also  RCB ಇವೆಂಟ್ ಮ್ಯಾನೇಜ್‌ ಮೆಂಟ್‌ ಕಂಪನಿ ಮುಖ್ಯಸ್ಥ ನಾಪತ್ತೆ..! ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget