ಕರಾವಳಿ

ಈ ಗ್ರಾಮಗಳಲ್ಲಿ ನಾಳೆ ದಿನಪೂರ್ತಿ ವಿದ್ಯುತ್ ಇರಲ್ಲ

342

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕೆಲವು ಕಡೆಗೆ ವಿದ್ಯುತ್ ಸಮಸ್ಯೆ ದೊಡ್ಡದಾಗಿ ಬಿಟ್ಟಿದೆ. ಪ್ರತಿ ದಿನ ಕರೆಂಟ್ ಇಲ್ಲ ಅನ್ನುವ ವಿಚಾರವೇ ಕೇಳಿ ಬರುತ್ತಿದೆ. ಈ ನಡುವೆ ನಾಳೆ (ನ.24) ಬೆಳಗ್ಗೆ 10 ರಿಂದ ಸಂಜೆ 6ರ ತನಕ ಪೂರ್ತಿ ಕರೆಂಟ್‌ ಇರುವುದಿಲ್ಲ ಎನ್ನುವ ಸುದ್ದಿ ಮೆಸ್ಕಾಂ ನಿಂದ ಹೊರಬಿದ್ದಿದೆ.

ಪುತ್ತೂರಿನ ನಗರ, ಕೆದಿಲ, ಕಬಕ, ವಾಟರ್ ಸಪ್ಲೈ , ಉಪ್ಪಿನಂಗಡಿ , ಎಕ್ಸ್ ಪ್ರೆಸ್ ಮತ್ತು ಕಾಂಚನ ಫೀಡರ್ ಗಳ ವಿದ್ಯುತ್ ಅನ್ನು ನಿಲುಗಡೆ ಮಾಡಲಾಗುತ್ತದೆ. 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫಿಡರ್ ಗಳಿಂದ ವಿದ್ಯುತ್ ಸರಬರಾಜಾಗುವ ಉಪ್ಪಿನಂಗಡಿ ಗ್ರಾಮ , ನೆಕ್ಕಿಲಾಡಿ ಗ್ರಾಮ, ಕೊಡಿಪ್ಪಾಡಿ , ಪಡ್ನೂರು, ಮುರ, ಕಬಕ ಮತ್ತು ವಿದ್ಯಾಪುರ ಈ ಸ್ಥಳಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. 33 ಕೆ.ವಿ ಪುತ್ತೂರು ,ಕಡಬ, ಸುಬ್ರಹ್ಮಣ್ಯ ಹಾಗೂ 33 ಕೆ.ವಿ ಪುತ್ತೂರು, ಸವಣೂರು, ನೆಲ್ಯಾಡಿ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವ ಕಾರಣ ಈ ಭಾಗಗಳಲ್ಲೂ ನಾಳೆಯ ದಿನ ವಿದ್ಯುತ್ ಇರುವುದಿಲ್ಲ. ಹಾಗಾಗೀ ಎಲ್ಲಾ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಪುತ್ತೂರಿನಲ್ಲಿ ಅಪಾಯಕಾರಿ ಮರಗಳ ತೆಗಿಯುವುದರ ಉದ್ದೇಶದಿಂದ ವಿದ್ಯುತ್‌ ಸ್ಥಗಿತಗೊಳಿಸಲಾಗುತ್ತಿದೆ.

See also  ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು,ನಾಪತ್ತೆಯಾದವರಿಗಾಗಿ ಭಾರಿ ಹುಡುಕಾಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget