ಚಿಕ್ಕಮಗಳೂರು

ಹತ್ತು ವರ್ಷಗಳಿಂದ ಮನವಿ ಮಾಡಿದ್ರೂ ನಿರ್ಮಾಣವಾಗದ ಬಸ್ ನಿಲ್ದಾಣ, ಭಿಕ್ಷಾಟನೆಗಿಳಿದು ಬಸ್ ನಿಲ್ದಾಣ ನಿರ್ಮಿಸಿದ ಸ್ಥಳೀಯರು..!

185

ನ್ಯೂಸ್ ನಾಟೌಟ್ : ಬಸ್ ನಿಲ್ದಾಣಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದ್ದು,ಇದೀಗ ವಿನೂತನ ಪ್ರತಿಭಟನೆಗೆ ಮುಂದಾದ ಘಟನೆ ಚಿಕ್ಕಮಗಳೂರು (Chikkamagluru) ಜಿಲ್ಲೆಯಲ್ಲಿ ನಡೆದಿದೆ.ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ಬಸ್​ ನಿಲ್ದಾಣವಿಲ್ಲದೆ (Bus Stand) ಜನ ಪರದಾಡುತ್ತಿದ್ದರು.

ಈ ಪ್ರದೇಶದಲ್ಲಿ ಜನ ಸರಿಯಾದ ಬಸ್ ತಂಗುದಾಣವಿಲ್ಲದೇ ನಿತ್ಯ ಪರದಾಟ ನಡೆಸುತ್ತಿದ್ದಾರೆ.ಭಾರಿ ಮಳೆ ಬಂದಾಗ ಜನರು ಮಳೆಯಲ್ಲಿಯೇ ಒದ್ದೆಯಾಗಿಕೊಂಡು ಇರೋ ಪರಿಸ್ಥಿತಿ ಇಲ್ಲಿನ ಜನಗಳದ್ದು.ಶಾಲಾ ಮಕ್ಕಳ ಪಾಡಂತು ಹೇಳತೀರದಾಗಿದೆ.ಇನ್ನು ಪುಟ್ಟ ಪುಟ್ಟ ಮಕ್ಕಳಿರುವ ತಾಯಿಯರು ಬಸ್‌ ಬರೋ ವೇಳೆಗೆ ಸುಸ್ತಾಗಿ ಬಿಡ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸ್ಥಳೀಯರು ಬಸ್ ನಿಲ್ದಾಣ ಮಾಡಿಸುವಂತೆ ಹತ್ತು ವರ್ಷಗಳಿಂದ ನೂರಾರು ಬಾರಿ ಮನವಿ ಮಾಡಿದ್ದಾರೆ . ಆದರೂ ಯಾವುದೇ ರೀತಿಯ ಉಪಯೋಗವಾಗಿಲ್ಲ.ಇದರಿಂದ ರೋಸಿಹೋದ ಅಲ್ಲಿನ ಸಾರ್ವಜನಿಕರು ಭಿಕ್ಷಾಟನೆ ಮಾಡಿ ಅದರಿಂದ ಬಂದ ಹಣದಿಂದ ಟಾರ್ಪಲ್ ಖರೀದಿಸಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿ ಸುದ್ದಿಯಾಗಿದ್ದಾರೆ.

See also  ಚಿನ್ನದಂಗಡಿಗೆಂದು ಬಂದ ಬಾಲಕಿ ಜತೆ ಮಾಲೀಕನ ಅಸಭ್ಯ ವರ್ತನೆ..!ಬಾಲಕಿ ತಾಯಿ ಸೇರಿದಂತೆ ಸಾರ್ವಜನಿಕರಿಂದ ಗೂಸಾ..ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget