ಕರಾವಳಿಸುಳ್ಯ

NMPUC ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ, ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ವಿದ್ಯಾರ್ಥಿ ಯಾರು..?

150

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ಪ್ರೊ ಕಬಡ್ಡಿಗೆ ಆಯ್ಕೆಯಾಗಿರುವ ನಡುವೆಯೇ ಇದೀಗ ಅದೇ ಸಂಸ್ಥೆಯ NMPUC ವಿದ್ಯಾರ್ಥಿ ಕೂಡ ಕಬಡ್ಡಿಯಲ್ಲಿ ರಾಷ್ಟ್ರಮಟ್ಟದ ಕೂಟದಲ್ಲಿ ಭಾಗವಹಿಸಿದ್ದಾರೆ.

ಮಾದೇಶ್ ಬಿ.ಪಿ. ರಾಷ್ಟ್ರ ಮಟ್ಟದ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಸ್ಕೂಲ್ ಗೇಮ್ಸ್ ಫೆಡರೇಷನ್ ಇಂಡಿಯಾ ವತಿಯಿಂದ ಆದಿ ಚುಂಚನಗಿರಿ ಕಾಲೇಜು ಮಂಡ್ಯದಲ್ಲಿ ಕೂಟವನ್ನು ಆಯೋಜಿಸಲಾಗಿತ್ತು. ಜನವರಿ 24ರಿಂದ 27ರ ತನಕ ಕೂಟ ನಡೆದಿತ್ತು. ಈ ಕೂಟದಲ್ಲಿ NMPUC ವಿದ್ಯಾರ್ಥಿ ಮಾದೇಶ್ ಬಿ ಪಿ ತಂಡವನ್ನು ಪ್ರತಿನಿಧಿಸಿದ್ದು ವಿಶೇಷವಾಗಿತ್ತು. ಇವರು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ.

See also  ಸಂಪಾಜೆ: ಕಾರು -ಬಸ್ ನಡುವೆ ಭೀಕರ ಅಪಘಾತ, ಮೂವರು ದಾರುಣ ಸಾವು
  Ad Widget   Ad Widget   Ad Widget   Ad Widget   Ad Widget   Ad Widget   Ad Widget