ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ ಲಭಿಸಿದೆ ಹಾಗೂ ಯೂನಿಟ್ ಫಸ್ಟ್ ಯೋಜನಾಧಿಕಾರಿ ಚಿತ್ರಲೇಖ ಕೆ.ಎಸ್. ಅವರು ರಾಜ್ಯ ಮಟ್ಟದ ಅತ್ಯುತ್ತಮ ಯೋಜನಾಧಿಕಾರಿ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಬೆಂಗಳೂರಿನ ಗಾಜಿನ ಮನೆ ರಾಜಭವನದಲ್ಲಿ ಮಾ. 17ರಂದು ನಡೆಯಿತು. ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದರು. ಎನ್.ಎಂ.ಸಿ. ಪ್ರಾಂಶುಪಾಲ ರುದ್ರಕುಮಾರ್ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಚಿತ್ರಲೇಖ ಪ್ರಶಸ್ತಿ ಸ್ವೀಕರಿಸಿದರು.ಇವರ ಸಾಧನೆಗೆ ಆಡಳಿತ ಮಂಡಳಿ,ಪ್ರಾಂಶುಪಾಲರು, ಎನ್.ಎಸ್.ಎಸ್. ಘಟಕಾಧಿಕಾರಿಗಳು,ಎನ್.ಎಸ್.ಎ ಸ್ ನಾಯಕರು ಶಿಕ್ಷಕ-ಶಿಕ್ಷಕೇತರ ವೃಂದ & ವಿಧ್ಯಾರ್ಥಿ ವೃಂದ ಶುಭ ಹಾರೈಸಿದ್ದಾರೆ.