ಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ ವತಿಯಿಂದ ಕ್ಷೇತ್ರ ಅಧ್ಯಯನ, ಕಡಮಾಜೆ ಫಾರ್ಮ್ ಗೆ ಭೇಟಿ, ಕೃಷಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

177

ನ್ಯೂಸ್ ನಾಟೌಟ್: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಒಂದು ದಿನದ ಕ್ಷೇತ್ರ ಅಧ್ಯಯನ ಪ್ರಯುಕ್ತ ಕಡಮಾಜೆ ಫಾರ್ಮ್ ಗೆ ಇತ್ತೀಚೆಗೆ ಭೇಟಿ ನೀಡಲಾಯಿತು.

ಫಾರ್ಮ್ ನ ಮುಖ್ಯಸ್ಥ ದೇವಿಪ್ರಸಾದ್ ಕೆ. ಕೃಷಿ ಚಟುವಟಿಕೆಯಲ್ಲಿ ಯಾವ ರೀತಿ ನಡೆಸಬಹುದು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಬೇರೆ ಬೇರೆ ಪ್ರಾಣಿ ಸಾಕಾಣಿಕೆಗಳ ಪ್ರಯೋಜನಗಳು, ಸಂಪನ್ಮೂಲಗಳ ಮರು ಬಳಕೆಯ ಪ್ರಾತ್ಯಕ್ಷಿಕೆ, ಸರಕಾರದಿಂದ ದೊರಕುವ ಸೌಲಭ್ಯಗಳು ಹಾಗೂ ಸವಾಲುಗಳ ಬಗ್ಗೆ ವಿವರಿಸಿದರು. ಕ್ಷೇತ್ರ ಅಧ್ಯಯನ ಭೇಟಿಯಲ್ಲಿ 21 ವಿದ್ಯಾರ್ಥಿಗಳು ಹಾಗೂ ವಿಭಾಗದ ಮುಖ್ಯಸ್ಥರು ಕೃಪಾ ಎ.ಎನ್ ಹಾಗೂ ಶೋಭಾ. ಎ ಹಾಗೂ ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.

See also  ಸುಳ್ಯ:ಗಂಭೀರ ಗಾಯಗೊಂಡಿದ್ದ ಅಟೋ ಚಾಲಕ ನಿಧನ, 6 ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget