Latest

ಸುಳ್ಯ:ಎನ್.ಎಮ್.ಸಿ ಎನ್ಎಸ್ಎಸ್ ಘಟಕದ ವಿದ್ಯಾರ್ಥಿನಿ ಯುವ ಜನ ಉತ್ಸವಕ್ಕೆ ಆಯ್ಕೆ,ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕುಮಾರಿ ಅಕ್ಷತಾ.ಸಿ.

523

ನ್ಯೂಸ್ ನಾಟೌಟ್ : ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ನೆಹರೂ ಮೆಮೋರಿಯಲ್ ಕಾಲೇಜು ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿನಿ ಕುಮಾರಿ ಅಕ್ಷತಾ ಸಿ ಅವರು ಯುವ ಜನ ಉತ್ಸವಕ್ಕೆ ಆಯ್ಕೆಯಾಗಿದ್ದಾರೆ.

ಅಕ್ಷತಾ ಸಿ ದ್ವಿತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಚೊಕ್ಕಾಡಿ ಅಮರಪಡ್ನೂರು ಗ್ರಾಮದ ಚೂಂತಾರು ಮನೆಯ ಶಂಕರನಾರಾಯಣ ಭಟ್ ಹಾಗೂ ತುಷಾರ ಸಿಯವರ ಪುತ್ರಿ.

ಮೈಸೂರಿನಲ್ಲಿ(ಎನ್‌ಎಸ್‌ಎಸ್ ಭವನ, ಸರಸ್ವತಿಪುರಂ) ನಡೆಯಲಿರುವ ಈ ಯುವ ಜನ ಉತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದ್ದು,ಇವರಿಗೆ ಆಡಳಿತ ಮಂಡಳಿ,ಪ್ರಾಂಶುಪಾಲರು, ಎನ್.ಎಸ್.ಎಸ್ ಘಟಕಾಧಿಕಾರಿಗಳು,ಎನ್.ಎಸ್.ಎ ಸ್ ನಾಯಕರು ಶಿಕ್ಷಕ-ಶಿಕ್ಷಕೇತರ ವೃಂದ & ವಿಧ್ಯಾರ್ಥಿ ವೃಂದ ಶುಭ ಹಾರೈಸಿದ್ದಾರೆ.ಯುವ ಜನ ಉತ್ಸವವು 17/03/2025 ರಂದು ಆರಮಭಗೊಂಡಿದ್ದು, 21/03/2025ರವರೆಗೆ ನಡೆಯಲಿದೆ.

See also  ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಕಾರ್ಯಕ್ರಮ,ಸಿಎಂ ಸಿದ್ದರಾಮಯ್ಯ ಭಾಷಣ ;ಬಿಜೆಪಿ ಕಾರ್ಯಕರ್ತೆಯರಿಂದ ಪ್ರತಿಭಟನೆ: ಸಿದ್ದರಾಮಯ್ಯ ಗೋ ಬ್ಯಾಕ್ ಪಾಕಿಸ್ತಾನ್ ಎಂಬ ಘೋಷಣೆ;ಸಿಎಂ ಕೆಂಡಾಮಂಡಲ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget