ಕ್ರೈಂವೈರಲ್ ನ್ಯೂಸ್

ಕುಡಿದ ಮತ್ತಿನಲ್ಲಿ ಕುಡಿಯುವ ನೀರಿನ ಟ್ಯಾಂಕ್ ಏರಿ ರಂಪಾಟ..! ರಾತ್ರೋರಾತ್ರಿ ಟ್ಯಾಂಕ್ ಏರಿದ ನಟರಾಜ..! ಮುಂದೇನಾಯ್ತು?

166

ನ್ಯೂಸ್ ನಾಟೌಟ್: ಮದ್ಯದ ನಶೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ಏರಿದ್ದು ಕೆಳಗಿಳಿಯಲಾಗದೆ ಪರಿದಾಡಿದ್ದಾನೆ.

ಕೆಳಗಿಳಿಯಲು ಸಾಧ್ಯವಾಗದೆ ಪರದಾಡುತ್ತಿದ್ದವನನ್ನು ಅಗ್ನಿಶಾಮಕ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿದ ಘಟನೆ, ಶಿವಮೊಗ್ಗದ ಕಾಶಿಪುರ ಬಡಾವಣೆಯ ಶಿವಪ್ಪನಾಯಕ ಲೇಔಟ್‌ನ ಗುರುವಾರ ರಾತ್ರಿ ಘಟನೆ ಸಂಭವಿಸಿದೆ.

ಸ್ನೇಹಿತರೊಂದಿಗೆ ಬಂದಿದ್ದ ನಟರಾಜ ಎಂಬಾತ ಮದ್ಯ ಸೇವಿಸಿದ್ದಾನೆ. ಈ ನಶೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ಏರಿದ್ದು ಕೆಳಗಿಳಿಯಲಾಗದೆ ಪರಿದಾಡಿದ್ದಾನೆ. ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಟ್ಯಾಂಕ್‌ ಮೇಲೆ ಹತ್ತಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಕಟ್ಟಿ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.ಟ್ಯಾಂಕ್‌ಗೆ ಮೆಟ್ಟಿಲುಗಳಿವೆ. ಆದರೆ ಅವು ಸರಿ ಇಲ್ಲದಿದ್ದರಿಂದ ನಟರಾಜನಿಗೆ ಕೆಳಗಿಳಿಯಲು ಭೀತಿ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ನೆರೆಹೊರೆಯ ರಸ್ತೆಯ ನಿವಾಸಿಗಳು ಸೇರಿದ್ದು, ಟ್ಯಾಂಕ್‌ನಿಂದ ಕೆಳಗಿಳಿಸಿದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿನೋಬನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

See also  ಸುಳ್ಯ: 'ವೇದ ಅಧ್ಯಯನದಿಂದ ಭಾರತೀಯ ಸಂಸ್ಕೃತಿಯ ಉಳಿವು ಸಾಧ್ಯ' , ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget