ಕ್ರೈಂಸುಳ್ಯ

ಭೀಕರ ರಸ್ತೆ ಅಪಘಾತ! ತುಮಕೂರಿನಲ್ಲಿ ಸುಳ್ಯದ ಯುವಕನ ದುರಂತ ಅಂತ್ಯ!

331

ನ್ಯೂಸ್ ನಾಟೌಟ್: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆ ಅಪಘಾತದಿಂದ ಸುಳ್ಯದ ಯುವಕ ಮೃತಪಟ್ಟಿರುವ ಘಟನೆ ಭಾನುವಾರ ಮಾರ್ಚ್ 19 ರಂದು ನಡೆದಿದೆ.

ಸುಳ್ಯದ ಕೇರ್ಪಳದ ನಿವಾಸಿಯಾಗಿರುವ ರಿಕ್ಷಾ ಚಾಲಕ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಪುತ್ತೂರಿನ ಟೋಲ್‌ ಸುವರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.

ನಿನ್ನೆ ಮಾರ್ಚ್ 19ರ ರಾತ್ರಿ ವೇಳೆ ಬೈಕ್‌ನಲ್ಲಿ ತೆರಳುವಾಗ ರಸ್ತೆ ಅಪಘಾತ ಸಂಭವಿಸಿದ್ದು. ಭೀಕರ ಅಪಘಾತದಲ್ಲಿ ಪ್ರಜ್ವಲ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಮನೆಯವರು ಸುಳ್ಯದಿಂದ ತುಮಕೂರಿಗೆ ತೆರಳಿರುವುದಾಗಿ ವರದಿ ತಿಳಿಸಿದೆ.

See also  ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ರೂಪಾಯಿ ಸಾಲ ಕೊಟ್ಟ IMF..! ಭಾರತದ ವಿರೋಧದ ನಡುವೆಯೂ ಸಾಲ ಮಂಜೂರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget