ಕರಾವಳಿಕ್ರೈಂ

ಬಳ್ಳಾರಿಯಿಂದ ಹೊರಟ ಶಬರಿಮಲೆ ಯಾತ್ರಿಕರ ಬಸ್ ಅಪಘಾತ:ಹಲವರಿಗೆ ಗಾಯ

329

ನ್ಯೂಸ್ ನಾಟೌಟ್: ಶಬರಿ ಮಲೆಗೆ ಹೊರಟ ಬಸ್ಸೊಂದು ಬ್ರೇಕ್ ಫೇಲ್ ಆಗಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ಬಳ್ಳಾರಿಯಿಂದ ಹೊರಟ ಮಿನಿ ಬಸ್ ಬೆಳ್ತಂಗಡಿಯ ಮುಂಡಾಜೆಯ ಉಳ್ಳಾಲ್ತಿ ಕಟ್ಟೆ ಎಂಬಲ್ಲಿ ಬ್ರೇಕ್ ಫೇಲ್ ಆಗಿದ್ದು, ಬಸ್ ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ತಪ್ಪಿದ ಭಾರಿ ಅನಾಹುತ:

ವಾಹನ ನುಗ್ಗಿದ ಸ್ಥಳದಲ್ಲಿ ಕಂದಕ ಹಾಗೂ ವಿದ್ಯುತ್ ಕಂಬವಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತವೊಂದು ತಪ್ಪಿದೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು,ಗಾಯಾಳುಗಳನ್ನು ಕೂಡ್ಲಗಿ ತಾಲೂಕಿನ ಚಿಕ್ಕಜೋಗೆ ಹಳ್ಳಿಯ ಶಶಿ, ಜಲಧರ ರಘು, ಬಸವರಾಜ್, ಲೋಕ ಎಂದು ಗುರುತಿಸಲಾಗಿದೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಕೆಲವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬೆಳ್ತಂಗಡಿ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

See also  ಕೆಲಸದ ಒತ್ತಡದಿಂದಾಗಿ ಲೆಕ್ಕ ಪರಿಶೋಧಕಿ ಸಾವನ್ನಪ್ಪಿದ್ರೂ ಅಂತ್ಯಕ್ರಿಯೆಗೆ ಬಾರದ ಸಂಸ್ಥೆಯ ಮುಖ್ಯಸ್ಥ..! ಆಕೆಯ ತಾಯಿ ಕಂಪನಿಗೆ ಬರೆದ ಪತ್ರದಲ್ಲೇನಿದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget