ಕ್ರೈಂಬೆಂಗಳೂರು

ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ ದಹನ ಪ್ರಕರಣಕ್ಕೆ ರೋಚಕ ತಿರುವು! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸತ್ಯ ಘಟನೆ!

257

ಬೆಂಗಳೂರಿನ ಬೇಡರಹಳ್ಳಿಯಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ಸು ಅಗ್ನಿಗಾಹುತಿಯಾಗಿ ಅದರೊಳಗಿದ್ದ ಕಂಡಕ್ಟರ್‌ ದಹನವಾದ ದುರ್ಘಟನೆಯ ತನಿಖೆಯಲ್ಲಿ ಇದೀಗ ಮಹತ್ವದ ತಿರುವು ದೊರಕಿದೆ. ಇದು ಆಕಸ್ಮಿಕವಲ್ಲ ಕಂಡಕ್ಟರ್‌ ಮಾಡಿಕೊಂಡಿರುವ ಆತ್ಮಹತ್ಯೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಯುಪಿಐ ಮೂಲಕ ಹಣ ಪಾವತಿ ಮಾಡಿರುವುದು ಈ ಸುಳಿವು ನೀಡಿದೆ ಎನ್ನಲಾಗಿದೆ.

ಯುಪಿಐಯಲ್ಲಿ ಕಂಡಕ್ಟರ್‌ ಮುತ್ತಯ್ಯ ಅವರ ಖಾತೆಯಿಂದ ಕಳುಹಿಸಲಾಗಿದ್ದ 700 ರೂಪಾಯಿ ಈ ಸುಳಿವು ನೀಡಿದ್ದು, ಇದರಿಂದಾಗಿ ಬಿಎಂಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿಲ್ಲ, ನಿರ್ವಾಹಕ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ.

ಮುತ್ತಯ್ಯ ಬಸ್ ನಿಲುಗಡೆಯಾದ ನಂತರ ಹೊರ ಹೋಗಿ ಮಧ್ಯರಾತ್ರಿ ಒಂದು ಗಂಟೆ ವರೆಗೂ ಫೋನಿನಲ್ಲಿ ಮಾತನಾಡಿದ್ದಾರೆ. ಡ್ರೈವರ್ ಪ್ರಕಾಶ್ ಅವರನ್ನು ರೂಮಿನಲ್ಲಿ ಮಲಗುವಂತೆ ಹೇಳಿ ಆ ದಿನದ ಕಲೆಕ್ಷನ್ ಹಣವನ್ನು ಪ್ರಕಾಶ್ ಕೈಗೆ ಕೊಟ್ಟಿದ್ದಾರೆ. ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್‌ನಿಂದ ಹೊರ ಹೋಗಿ, ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ಹೋಗಿದ್ದಾರೆ. ಅಲ್ಲಿ 700 ರೂಪಾಯಿಗಳ ಪೆಟ್ರೋಲ್‌ ಖರೀದಿಸಿರುವುದು, ಅವರ ಯುಪಿಐ ಪಾವತಿಯ ಪರಿಶೀಲನೆ ವೇಳೆ ಇದು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ರಾತ್ರಿಯಲ್ಲಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆ ಮಾಡಿದ್ದು, ಪೆಟ್ರೋಲ್ ಬಂಕ್‌ಗೆ ಹಣ ಪಾವತಿಸಿ ಎಂದು ತಿಳಿದುಬಂದಿದೆ. ಪೆಟ್ರೋಲ್, ಡಿಸೇಲ್ ಖರೀದಿಸಿ, ಐದು ಲೀಟರ್ ಪೆಟ್ರೋಲ್, ಎರಡು ಲೀಟರ್ ಡಿಸೇಲ್ ಅನ್ನು ನೀರಿನ ಕ್ಯಾನ್‌ನಲ್ಲಿ ಮುತ್ತಯ್ಯ ತಂದಿದ್ದರು. ಈ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯೂ ಮಾಹಿತಿ ನೀಡಿದ್ದು ಸಿಸಿಟಿವಿಯಲ್ಲೂ ಈ ದೃಶ್ಯ ಸೆರೆಯಾಗಿದೆ ಎಂಬ ಮಾಹಿತಿ ದೊರತಿವೆ.

ಮುಂಜಾನೆ ವೇಳೆಗೆ ಬಸ್ಸಿನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಿ ಪೆಟ್ರೋಲ್, ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬಹಿರಂಗವಾಗಿದ್ದು, ಈ ಕುರಿತು ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎನ್ನಲಾಗಿದೆ.

See also  ಆಟೋ ಪಾರ್ಕಿಂಗ್ ವಿಚಾರಕ್ಕೆ ಸುಕುಮಾರ್ ಮನೆಗೆ ನುಗ್ಗಿ ಹೊಡೆದ ಸೈಯದ್ ಸ್ನೇಹಿತರು..! ಭಗವಾ ಧ್ವಜ ಇದಕ್ಕೆ ಕಾರಣ ಎಂದ ಸ್ಥಳೀಯರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget