ಕ್ರೈಂಬೆಂಗಳೂರು

ಬಾಡಿ ಬಿಲ್ಡಿಂಗ್ ನಲ್ಲಿ ಖ್ಯಾತಿಗಳಿಸಿದ್ದ ಆಂಧ್ರ ಮೂಲ ವ್ಯಕ್ತಿ ಬೆಂಗಳೂರಿನಲ್ಲಿ ಸರಗಳ್ಳ! ಈತನನ್ನು ಹೆಡೆಮುರಿ ಕಟ್ಟಿದ್ದೇ ಒಂದು ರೋಚಕ ಕಾರ್ಯಾಚರಣೆ..!

243

ನ್ಯೂಸ್ ನಾಟೌಟ್ :  ಅಂತರಾಜ್ಯ ಕಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಸೈಯದ್​ ಬಾಷಾ(34), ಶೇಕ್ ಅಯೂಬ್​(32) ಬಂಧಿತರು ಎಂದು ತಿಳಿದುಬಂದಿದೆ.

ಬಂಧಿತರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್​​ಗಳನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಸೈಯದ್, ಆಂಧ್ರ ಪ್ರದೇಶದಿಂದ ಜಾಲಿ ರೈಡ್ ಬಂದು ಬೆಂಗಳೂರಿನಲ್ಲಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದ. ಇನ್ನು ವಿಶೇಷವೆಂದರೆ ಸೈಯದ್​ ಆಂಧ್ರದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮಿಸ್ಟರ್ ಆಂಧ್ರ ಪ್ರಶಸ್ತಿ ಪಡೆದಿದ್ದಾನೆ. ಅಲ್ಲಿ ಖ್ಯಾತಿ ಪಡೆದು ಒಳ್ಳೆ ಹೆಸರು ಮಾಡಿ ಬೆಂಗಳೂರಿಗೆ ಬಂದು ಕಳ್ಳತನದ ಕೆಲಸಕ್ಕೆ ಕೈಹಾಕಿದ್ದಾನೆ.

ಆಂಧ್ರದಿಂದ ಬಂದು ನಗರದಲ್ಲಿ ಲಾಡ್ಜ್ ಮಾಡಿ ಸೈಯದ್ ಪಾರ್ಟಿ ಮಾಡುತ್ತಿದ್ದ. ಮಾರನೆ ದಿನ ರಸ್ತೆಗಿಳಿದು ಸರಗಳವು ಮಾಡುತ್ತಿದ್ದ ಎನ್ನಲಾಗಿದೆ. ಹೀಗೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನಕಿ ಎಂಬುವವರ ಸರ ಕದ್ದಿದ್ದ, ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ. ದೂರು ಹಿನ್ನೆಲೆ ಪೊಲೀಸರು ಸಿಸಿಟಿವಿ ಜಾಡು ಹಿಡಿದು ಹೊರಟಾಗ ಸೈಯದ್ ಕದ್ದ ಬೈಕ್ ಸಿಕ್ಕಿತ್ತು. ಬೈಕ್ ಬಿಟ್ಟು ಹೋದವನು ಮತ್ತೆ ಬರುತ್ತಾನೆ ಎಂದು ಪೊಲೀಸರು ಬೈಕ್ ಗೆ ಜಿಪಿಎಸ್ ಅಳವಡಿಸಿದ್ದರು ಎಂದು ಮಾಹಿತಿ ದೊರೆತಿದೆ.

ಹತ್ತು ಹದಿನೈದು ದಿನಗಳವರೆಗೂ ತಾಳ್ಮೆಯಿಂದ ಕಾದಿದ್ದ ಪೊಲೀಸರು ನಂತರ ಯಾವಾಗ ಜಿಪಿಎಸ್ ಆಕ್ಟೀವ್ ಆಗುತ್ತದೆ, ಆಗ ಗಿರಿನಗರ ಪೊಲೀಸರೂ ಆತನ ಜಾಡು ಹಿಡಿದು ಹೊರಟರು. ಜಿಪಿಎಸ್ ನ ಫಾಲೋ ಮಾಡಿ ಕೊನೆಗೆ ವಿಶೇಷ ಪೊಲೀಸ್ ತಂಡದ ಬಲೆಗೆ ಮಿಸ್ಟರ್ ಆಂಧ್ರ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಮತ್ತೊಬ್ಬ ಆರೋಪಿ ಆತನ ಸಹಚರ ಶೇಕ್ ಅಯೂಬ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಆಂಧ್ರ ಮೂಲದ ಆರೋಪಿಗಳು ಬೆಂಗಳೂರಿಗೆ ಬಂದು ಇಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದರ. ಬಳಿಕ ಅದೇ ದ್ವಿಚಕ್ರ ವಾಹನದಲ್ಲಿ ಸರಗಳ್ಳತನ ಮಾಡಿ, ನಂತರ ದ್ವಿಚಕ್ರ ವಾಹನವನ್ನು ಅಲ್ಲೇ ಬಿಟ್ಟು ಆಟೋ ಮೂಲಕ ಕೆ.ಆರ್.ಪುರಂಗೆ ಹೋಗಿ ಅಲ್ಲಿಂದ ಬಸ್ ಏರಿ ತಮ್ಮ ಊರಿಗೆ ಪರಾರಿಯಾಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಖದೀಮರು ಸರಗಳ್ಳತನ ಮಾಡಿದ ಕೂಡಲೇ ಬಟ್ಟೆ ಬದಲಿಸುತ್ತಿದ್ದರು ಎನ್ನಲಾಗಿದೆ. ಸಿಸಿಟಿವಿಯಲ್ಲಿ ತಮ್ಮ ಮುಖ ತಿಳಿಯಬಾರದು. ಪೊಲೀಸರು ನಮ್ಮನ್ನು ಹಿಡಿಯಬಾರದೆಂದು ನಾನಾ ರೀತಿಯ ತಯಾರಿ ಮಾಡಿಕೊಂಡಿದ್ದರು ಎನ್ನಲಾಗಿದೆ.

See also  ಕಾಮುಕರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಯುವತಿಗೆ ಕಾರು ಡಿಕ್ಕಿ..! ಆಕೆಯ ಜೊತೆಗಿದ್ದ ರಮೇಶ್ ಹೇಳಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget