ಕರಾವಳಿಸುಳ್ಯ

ಮದ್ದಿಗೆಂದು ತೆರಳಿದ್ದ ನವವಿವಾಹಿತೆ ನಾಪತ್ತೆ: ಪತಿಯಿಂದ ಪೊಲೀಸ್ ಕಂಪ್ಲೆಂಟ್,ದೂರಿನಲ್ಲೇನಿದೆ?

310

.ನ್ಯೂಸ್ ನಾಟೌಟ್ : ನವವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಘಟನೆ ಸುಳ್ಯದ ಮರ್ಕಂಜದಿಂದ ವರದಿಯಾಗಿದೆ.ಆಕೆಯನ್ನು ಹುಡುಕಿಕೊಡಿ ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಏನಿದು ಘಟನೆ?

ರಾಜಶೇಖರ ಎಂಬವರ ಪತ್ನಿ ಕೀರ್ತಿಶ್ರೀ (26 ವರ್ಷ) ನಿನ್ನೆ ಎಲಿಮಲೆಯ ಕ್ಲಿನಿಕ್ ಒಂದಕ್ಕೆ ಮದ್ದಿಗೆ ತೆರಳಿದ್ದಾರೆ.ಆದರೆ ಮನೆಗೆ ಬಾರದೆ ಇರುವುದನ್ನು ಕಂಡು ಎಲ್ಲಾ ಕಡೆ ಹುಡುಕಾಡಿದ್ದಾರೆ.ಈ ಬಗ್ಗೆ ಹುಡುಕಿಕೊಡುವಂತೆ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?


ಜನವರಿ ೨೧ರಂದು ನನ್ನ ಆರೋಗ್ಯ ಸರಿ ಇಲ್ಲವೆಂದು ನನ್ನ ಪತ್ನಿ ನನ್ನ ಬಳಿ ಹೇಳಿದ್ದು ನಾನು ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ಮನೆಯಿಂದ ಜೀಪಿನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದು ಬಳಿಕ ಎಲಿಮಲೆಯ ಕ್ಲಿನಿಕ್ ಗೆ ಹೋಗುವುದಕ್ಕೆ ಬಸ್ ಹತ್ತಿಸಿದ್ದೇನೆ.೧೦.೩೦ ಕ್ಕೆ ಅವಳ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ನಾನು ಆಕೆಯ  ಮನೆಗೆ ಫೋನ್ ಮಾಡಿ ವಿಚಾರಿಸಿದೆ.ಆಕೆ ಇಲ್ಲಿಗೆ  ಬಂದಿಲ್ಲ  ಎಂಬ ವಿಷಯವನ್ನು ಆಕೆ ತಾಯಿ ತಿಳಿಸಿರುತ್ತಾರೆ. ನಂತರ ಎಲ್ಲಾ ಕಡೆಗಳಲ್ಲಿ , ಆಕೆಯ ಸಂಬಂಧಿಕರ ಮನೆಗಳಲ್ಲಿಯೂ  ವಿಚಾರಿಸಿದ್ದೇವೆ. ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದುದರಿಂದ ತಾವು ಕಾಣೆಯಾಗಿರುವ ನನ್ನ ಪತ್ನಿ ಕೀರ್ತಿಯನ್ನು ಪತ್ತೆ ಹಚ್ಚಿ ಕೊಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾಣೆಯಾಗಿದ್ದ ಸಂದರ್ಭ ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದಾರೆ. ಸುಮಾರು 5 ಅಡಿ 3 ಇಂಚು ಎತ್ತರವಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದಾರೆ .ಇವರನ್ನು ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸರು ತಿಳಿಸಿದ್ದಾರೆ.

See also  ಬಡವರಿಗೆ ಮನೆ ನೀಡದೆ ವಂಚನೆ: ಅಶೋಕ್ ರೈ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget