ಕ್ರೈಂವೈರಲ್ ನ್ಯೂಸ್

ನೆರೆ ಮನೆಯವನ ಕಾಮ ಕಾಟಕ್ಕೆ ಯುವತಿ ಬಲಿ..! ಪಾದದ ಧೂಳಿನಿಂದ ಆರೋಪಿಯನ್ನು ಪತ್ತೆ ಮಾಡಿದ್ದು ಹೇಗೆ..? ಆ ಮಗು ನೀಡಿದ್ದ ಸುಳಿವೇನು?

ನ್ಯೂಸ್ ನಾಟೌಟ್: ಮುಂಜಾನೆ ಮಹದೇಪುರದ ಮಹೇಶ್ವರಿ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನ ಮಹದೇವಪುರ ಪೊಲೀಸರು ಕೆಲವೆ ಗಂಟೆಯಲ್ಲಿ ಪತ್ತೆ ಮಾಡಿದ್ದಾರೆ.

ಮೃತದೇಹದ ಪಾದ ಕೊಟ್ಟ ಕ್ಲೂ, ಮತ್ತು ಪಕ್ಕದ ಮನೆ ಮಗುವಿನ ಹೇಳಿಕೆಯಿಂದ ಆರೋಪಿಯನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಕೊಲೆ‌ ಮಾಡಿ ಬಾಡಿ ಬಿಸಾಕಿ ಏನೂ ಗೊತ್ತಿಲ್ಲದಂತೆ ಪಕ್ಕದ‌ ಮನೆ ಅಂಕಲ್ ಕೃಷ್ಣ ಇದ್ದ ಎನ್ನಲಾಗಿದೆ ಆತನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ ಕೊಲೆ ಮಾಡಿ ಬಳಿಕ ದೇಹವನ್ನು ಡ್ರಮ್ ವೊಂದರಲ್ಲಿ ಇಟ್ಟಿದ್ದ ಆರೋಪಿ ಬೆಳಗ್ಗೆ ಐದು ಗಂಟೆ ಸುಮಾರಿಗೆ ಮನೆ ಮುಂದೆ ಬಿಸಾಡಿದ್ದ ಎನ್ನಲಾಗಿದೆ. ಧೂಳಿಲ್ಲದ ಪಾದ ನೋಡಿ ಪೊಲೀಸರು ಸಂಶಯಪಟ್ಟಿದ್ದು, ರಾತ್ರಿ ಹುಡುಗಿ ಮಿಸ್ಸಿಂಗ್ ಎಂದು ದೂರು ಬಂದಿತ್ತು. ಆದರೆ, ಯುವತಿಯ ಪಾದ ನೋಡಿ ಪೊಲೀಸರು ಹುಡುಗಿ ಹೊರಗಡೆ ಹೋಗಿಲ್ಲ ಅನ್ನೋದನ್ನ ಗಮನಿಸಿದ್ದಾರೆ.

ಹಾಗಾಗಿ ಮನೆಯವರು ಅಥವಾ ಪಕ್ಕದ ಮನೆಯವರಿಂದ ಈ ಕೃತ್ಯ ನಡೆದಿದೆ ಎಂದು ಸಂಶಯ ವ್ಯಕ್ತವಾಗಿತ್ತು. ಪಕ್ಕದಲ್ಲೇ ಯಾರೋ ಕೊಲೆ ಮಾಡಿ ಶವ ಬಿಸಾಕಿರೋ ಅನುಮಾನ ವ್ಯಕ್ತವಾಗಿತ್ತು‌. ಈ ವೇಳೆ ಅಕ್ಕಪಕ್ಕದ ಮನೆಯವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕೊಲೆಯಾದ ಮಹಾನಂದ ಎಂಬಾಕೆ ಪಕ್ಕದ ಮನೆಯಲ್ಲಿಯೇ ಇದ್ದ ಆರೋಪಿ ಕೃಷ್ಣ ನ‌ ಮನೆಗೆ ಹೋಗಿದ್ದನ ಬಾಲಕಿಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದಳು.

ಶವ ಪತ್ತೆಯಾಗಿ ಹಲವು ಗಂಟೆಗಳ ಕಾಲ ಕೃಷ್ಣ ಹೊರಗೇ ಬಂದಿರಲಿಲ್ಲ.ಈ ವೇಳೆ ತಮಗಿದ್ದ ಅನುಮಾನದ ಜೊತೆ ಮಗುವಿನ ಹೇಳಿಕೆ ಆಧರಿಸಿ ಕೂಡಲೇ ಆರೋಪಿ ಕೃಷ್ಣ ವಶಕ್ಕೆ ಪಡೆದಾಗ ವಿಚಾರ ಬಯಲಿಗೆ ಬಂದಿದೆ.ಒಡಿಶಾ ಮೂಲದ ಕೃಷ್ಣ ಚಂದ ಎಂಬಾತ ಸೇಟಿ ಟೆಕ್ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ, ಸ್ಟವ್ ಮೇಲೆ ಅನ್ನ ಮಾಡಲು ಪಾತ್ರೆ ಇಟ್ಟಿದ್ದ ಯುವತಿ ಮನೆಯಿಂದ ಹೊರಗೆ ಬಂದಿದ್ದಾಳೆ.

ಈ ವೇಳೆ ಕೃಷ್ಣನ ಮನೆಯ ಬಾಗಿಲ ಬಳಿ ಮಹಾನಂದ ಬಂದಾಗ ಅರೋಪಿ ಒಳಗೆ ಎಳೆದುಕೊಂಡಿದ್ದಾನೆ. ಯುವತಿಯನ್ನು ಬಲತ್ಕಾರ ಮಾಡಲು ಆರೋಪಿ ಯತ್ನಿಸಿ ಯುವತಿಗೆ ಬಲವಂತವಾಗಿ ಮುತ್ತು ನೀಡಲು ಮುಂದಾಗಿದ್ದು ಈ ವೇಳೆ ಯುವತಿ ನಿರಾಕರಿಸಿ ಕಿರುಚಾಡಲು ಯತ್ನಿಸಿದ್ದಾಳೆ. ಇದರಿಂದ ಭಯಗೊಂಡ ಕೃಷ್ಣ ಹಿಂಬದಿಯಿಂದ ಮೂಗು ಬಾಯಿ ಒಂದು ಕೈನಲ್ಲಿ ಮುಚ್ಚಿಕೊಂಡು ಮತ್ತೊಂದು ಕೈನಿಂದ ಕುತ್ತಿಗೆ ಹಿಸುಕಿದ್ದಾನೆ ಎನ್ನಲಾಗಿದೆ. ಈ ವೇಳೆ ಕಿರುಚಾಡಲು ಸಾದ್ಯವಾಗದೆ ಉಸಿರುಗಟ್ಟಿ ಯುವತಿ ಸಾವನಪ್ಪಿದ್ದಾಳೆ.

ಕೊಲೆ ಬಳಿಕ ಮನೆಯ ಬೆಡ್ ಶೀಟ್ ನಲ್ಲಿ ಸುತ್ತಿ ಡ್ರಮ್ ನಲ್ಲಿ ಇಟ್ಟಿದ್ದ ಕೃಷ್ಣ ಮುಂಜಾನೆ ಮನೆ ಮುಂದೆ ಶವ ಬಿಸಾಡಿದ್ದ ಎನ್ನಲಾಗಿದೆ. ಸದ್ಯ ಅರೋಪಿ ಕೃಷ್ಣ ನನ್ನು ಬಂಧಿಸಿ ಪೊಲಿಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಸುಬ್ರಹ್ಮಣ್ಯ ಪೊಲೀಸರ ಮಿಂಚಿನ ಕಾರ್ಯಾಚರಣೆ, ಒಂದೇ ವಾರದಲ್ಲಿ ಕಳವಾದ 6 ಮೊಬೈಲ್‌ ಗಳನ್ನ ಪತ್ತೆ ಹಚ್ಚಿದ್ದು ಹೇಗೆ..?

KSRTC: ಸರ್ಕಾರಿ ಸಾರಿಗೆ ಬಸ್ ಗಳ ದರ ಏರಿಕೆ..! ಡೀಸೆಲ್ – ಪೆಟ್ರೋಲ್, ಹಾಲು ಈಗ ಬಸ್ ದರವೂ ಹೆಚ್ಚಳಕ್ಕೆ ಸಿದ್ಧತೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಕೆಟ್‌ ಉಡಾವಣೆಗೊಂಡ ಬೆನ್ನಲ್ಲೇ ಭಾರಿ ಸ್ಫೋಟ..! ಈ ಘಟನೆ ನಡೆದದ್ದೆಲ್ಲಿ..? ಇಲ್ಲಿದೆ ವಿಡಿಯೋ