ಕೊಡಗುಕ್ರೈಂ

ಕೊಡಗು: ಕರಿಮೆಣಸು ಕೊಯ್ಲಿಗೆ ಬಂದಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ! ನಿಗೂಢ ಸಾವಿನ ಹಿಂದಿದೆಯ ಅಳಿಯನ ಕೈವಾಡ!

269

ನ್ಯೂಸ್ ನಾಟೌಟ್: ಕರಿಮೆಣಸು ಕೊಯ್ಲು ಕೆಲಸಕ್ಕೆ ಆಗಮಿಸಿದ ತಮಿಳುನಾಡಿನ ಮಹಿಳೆಯೊಬ್ಬರು ಮತ್ತಿಕಾಡು ಕಾಫಿ ತೋಟವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕಳೆದ 2 ವರ್ಷಗಳ ಹಿಂದೆ ತಮಿಳುನಾಡಿನ ತಿರುನೆಲ್ವಿ ಜಿಲ್ಲೆಯ ಗುಣಶೇಖರ್ ಎಂಬವರ ಪುತ್ರಿ ಶಾಲಿನಿ (21) ಎಂಬಾಕೆಯನ್ನು ಸಂಜೀವ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದರು. 2 ತಿಂಗಳ ಹಿಂದೆ ದಂಪತಿ ಕರಿಮೆಣಸು ಕೊಯ್ಲು ಕೆಲಸಕ್ಕೆಂದು ಕೊಡಗಿನ ಮತ್ತಿಕಾಡುವಿನ ಚೌಡಿಕಾಡು ತೋಟದ ಮನೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಏ.4 ರಂದು ತಮಿಳುನಾಡಿನಲ್ಲಿದ್ದ ಶಾಲಿನಿ ತಂದೆಗೆ ಕರೆ ಮಾಡಿದ್ದ ಸಂಜೀವ್, ಸೋಮವಾರ ಬೆಳಿಗ್ಗೆಯಿಂದ ಶಾಲಿನಿ ಕಾಣೆಯಾಗಿದ್ದಾಳೆ ಎಂದು ವಿಷಯ ತಿಳಿಸಿದ್ದು, ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್‌ ಠಾಣೆಗೂ ದೂರು ನೀಡಿದ್ದರು. ತಮಿಳುನಾಡಿನಿಂದ ಬಂದ ಶಾಲಿನಿಯ ತಂದೆ ಗುಣಶೇಖರ್, ಮಗಳು ಕಾಣೆಯಾಗಿರುವುದರಲ್ಲಿ ಅಳಿಯನ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಏ.6 ರಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಸಮೀಪದ ದೇವಿ ತೋಟದ ಮರದಲ್ಲಿ ಶಾಲಿನಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿತ್ತು.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಪ್ರಕಾಶ್‌, ಸುಂಟಿಕೊಪ್ಪ ಪೊಲೀಸ್‌ ಠಾಣಾಧಿಕಾರಿ ಶ್ರೀಧರ್, ಪೊಲೀಸ್‌ ಮುಖ್ಯಪೇದೆ ಸತೀಶ್, ಜಗದೀಶ್ ಸ್ಥಳ ಪರಿಶೀಲನೆ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ರಾತ್ರಿ ಸಂಘಟನೆಗಳ ಪ್ರಮುಖರ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದ ಪೊಲೀಸರು..! ಕಡಬ ಠಾಣೆಯ ಮುಂಭಾಗ ಹಿಂದೂ ಮುಖಂಡರಿಂದ ಪ್ರತಿಭಟನೆ, ಪ್ರಕರಣ ದಾಖಲು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget