Latestಕ್ರೈಂವಿಡಿಯೋವೈರಲ್ ನ್ಯೂಸ್

ರಾಷ್ಟ್ರೀಯ ಉದ್ಯಾನವನದ ಚಿರತೆಗಳ ಬಾಯಾರಿಕೆಗೆ ನೀರು ನೀಡಿ ಉದ್ಯೋಗ ಕಳೆದುಕೊಂಡ ಅರಣ್ಯ ಸಿಬ್ಬಂದಿ..! ವಿಡಿಯೋ ವೈರಲ್

1.4k

ನ್ಯೂಸ್ ನಾಟೌಟ್: ಮನುಷ್ಯರಂತೆ ಪ್ರಾಣಿಗಳಿಗೆ ಈ ಬೇಸಿಗೆ ಬಿಸಿಗೆ ಬಾಯಾರಿಕೆಯಾಗುವುದು ಸಹಜ. ಕೆಲವೊಮ್ಮೆ ಕಾಡಿನಲ್ಲಿರುವ ಕೊಳ, ಹಳ್ಳಗಳಲ್ಲಿನ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಬ್ಬಂದಿಯೊಬ್ಬರು ಚೀತಾ ಹಾಗೂ ಅದರ ಮರಿಗಳಿಗೆ ಅದರ ಮರಿಗಳಿಗೆ ಕುಡಿಯಲು ನೀರು ಇಟ್ಟು ಬಾಯಾರಿಕೆ ನೀಗಿಸುವ ಪ್ರಯತ್ನ ಮಾಡಿದ್ದಾರೆ.

ಈ ಸಿಬ್ಬಂದಿಯನ್ನು ಅರಣ್ಯ ಇಲಾಖೆಯ ಚಾಲಕ ಸತ್ಯನಾರಾಯಣ್ ಗುರ್ಜರ್ ಎಂದು ಗುರುತಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಬ್ಬಂದಿಯ ಅಶಿಸ್ತಿನ ವರ್ತನೆ ಎಂದು ಗುರುತಿಸಿ ಅಧಿಕಾರಿಗಳು ಆತನನ್ನು ಚಾಲಕನ ಹುದ್ದೆಯಿಂದ ತೆಗೆದುಹಾಕಿದ್ದಾರೆ ವರದಿ ತಿಳಿಸಿದೆ.

ಇತ್ತೀಚೆಗಷ್ಟೇ ಚೀತಾ ಜ್ವಾಲಾ ಹಾಗೂ ಅದರ ನಾಲ್ಕು ಮರಿಗಳನ್ನು ಸ್ವತಃ ಗ್ರಾಮಸ್ಥರೇ ಕಲ್ಲುಗಳಿಂದ ಹೊಡೆದಿದ್ದರು. ಈ ಘಟನೆ ನಡೆದ ಎರಡು ವಾರಗಳ ಬಳಿಕವೇ ಸಿಬ್ಬಂದಿಯೊಬ್ಬರು ಚೀತಾಗಳಿಗೆ ಕುಡಿಯಲು ನೀರು ನೀಡುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ವಿಡಿಯೋಗೆ ಸಂಬಂಧ ಪಟ್ಟಂತೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಉತ್ತಮ್ ಕುಮಾರ್ ಶರ್ಮಾ ಭಾನುವಾರ ಪ್ರತಿಕ್ರಿಯೆ ನೀಡಿದ್ದು, ಸಿಬ್ಬಂದಿ ಕೆಲವು ಸೂಚನೆಗಳನ್ನು ಉಲ್ಲಂಘಿಸಿದ್ದು ಅಶಿಸ್ತು ತೋರಿದ್ದಾರೆ. ಈ ವಿಡಿಯೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಈ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ತಾತ್ಕಾಲಿಕವಾಗಿ ವೀಸಾ ನಿಷೇಧಿಸಿದ ಸೌದಿ ಅರೇಬಿಯಾ..! ಹಜ್ ಯಾತ್ರೆಗೂ ಮುಂಚಿತವಾಗಿ ಮಹತ್ವದ ನಿರ್ಧಾರ..!

ಕೇರಳದಿಂದ ಇಬ್ಬರು ನಕ್ಸಲರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸ್..! 3 ರಾಜ್ಯಗಳಲ್ಲಿ ಇಬ್ಬರ ವಿರುದ್ಧ 70ಕ್ಕೂ ಹೆಚ್ಚು ಪ್ರಕರಣ..!

See also  ಪತ್ನಿಯ ಮಾಂಗಲ್ಯ ಸರ ಕದ್ದು ಓಡಿದವರನ್ನು ಬೆನ್ನಟ್ಟಿದ ಪತಿಯನ್ನು ಕಲ್ಲಿನಿಂದ ಜಜ್ಜಿದ ಕ್ರೂರಿಗಳು..! ಪ್ರಕರಣ ದಾಖಲು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget