ಕರಾವಳಿ

ಯಾರೂ ಕರೆಂಟ್‌ ಬಿಲ್ ಕಟ್ಟಬೇಡಿ, ತೊಂದರೆಯಾದ್ರೆ ನಾನಿದ್ದೇನೆ: ನಳಿನ್ ಕುಮಾರ್ ಕಟೀಲ್‌

199

ನ್ಯೂಸ್ ನಾಟೌಟ್: ಕಾಂಗ್ರೆಸ್ ನ ಗ್ಯಾರಂಟಿಗಳನ್ನು ನಂಬಿ ಓಟು ಹಾಕಿರುವ ಜನರು ಇದೀಗ ವಿದ್ಯುತ್ ಬಿಲ್ ಕಟ್ಟಲು ರಾಜ್ಯಾದ್ಯಂತ ನಿರಾಕರಿಸುತ್ತಿರುವ ಹಲವು ವರದಿಗಳನ್ನು ನೋಡಿದ್ದೇವೆ. ಇದೀಗ ವಿದ್ಯುತ್‌ ಬಿಲ್ ಕಟ್ಟದೆ ಇರುವ ಜನರ ಪರ ನಾನಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚಿಗೆ ಮಾತನಾಡಿದ ಅವರು, ಐದು ಉಚಿತ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಹೀಗಾಗಿ ಜನರು ಕರೆಂಟ್ ಬಿಲ್ ಕಟ್ಟಬಾರದು ಎಂದು ನಾನು ಕರೆ ಕೊಡುತ್ತಿದ್ದೇನೆ. ಬಿಲ್ ಪಾವತಿ ಕೇಳಲು ಹೋದಾಗ ಜನ ಆಕ್ರೋಶ ಸಹಜ. ಈ ವೇಳೆ ಜನರಿಗೆ ತೊಂದರೆಯಾದ್ರೆ ನಾವು ಜನರ ಪರ ನಿಲ್ಲುತ್ತೇವೆ ಎಂದು ನಳಿನ್ ತಿಳಿಸಿದರು.

See also  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, ಬಜ್ಪೆಯಲ್ಲಿ ತೀವ್ರ ಕಟ್ಟೆಚ್ಚರ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget