ನ್ಯೂಸ್ ನಾಟೌಟ್:ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿತ್ತು.ಇದೀಗ ಈ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಲೇ ಇದೆ. ಪತ್ನಿ ಮುಸ್ಕಾನ್ ಮತ್ತು ಆಕೆಯ ಗೆಳೆಯ ಸಾಹಿಲ್ ಶುಕ್ಲಾ ಸೇರಿಕೊಂಡು ಗಂಡ ಸೌರಭ್ ರಜಪೂತ್ ನನ್ನೇ ಭೀಕರವಾಗಿ ಹತ್ಯೆ ಮಾಡಿದ್ದರು. ಕೊಲೆ ಮಾಡಿದ್ದಲ್ಲದೇ ಕೃತ್ಯದ ಸ್ವಲ್ಪವೂ ಸುಳಿವು ಸಿಗಬಾರದೆಂಬ ಕಾರಣಕ್ಕೆ ಗಂಡ ಸೌರಭ್ ನನ್ನ ತುಂಡು ತುಂಡಾಗಿ ಕತ್ತರಿಸಿ ಡ್ರಮ್ನಲ್ಲಿ ಹಾಕಿದ್ದಲ್ಲದೇ ಅದಕ್ಕೆ ಸಿಮೆಂಟ್ ತುಂಬಿಸಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಹೆಂಡತಿ ಮುಸ್ಕಾನ್ ಆಗಿದ್ದು,ಎಲ್ಲರೂ ಶಾಕ್ ಆಗುವಂತೆ ಆಗಿತ್ತು. ಇದೀಗ ಪ್ರಿಯಕರನ ಜೊತೆ ಸೇರಿ ಗಂಡನನ್ನ ಕೊಂದು ಜೈಲು ಸೇರಿದ್ದ ಮುಸ್ಕಾನ್ ಗರ್ಭಿಣಿಯಾಗಿದ್ದಾಳೆ ಎಂಬ ಶಾಕಿಂಗ್ ವರದಿ ಹೊರಬಿದ್ದಿದೆ.
ಮೀರತ್ನಲ್ಲಿ ಭೀಕರ ಹತ್ಯೆ ಪ್ರಕರಣ ತನಿಖೆ ನಡೆಸಿದಾಗ ಈ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆದುಕೊಳ್ಳುತ್ತತ್ತಿದ್ದು, ಪೊಲೀಸರ ನಿರಂತರ ತನಿಖೆಯಿಂದಾಗಿ ಕೊಲೆಯ ಹಿಂದಿನ ಇಂಚಿಂಚೂ ಮಾಹಿತಿ ಇಲ್ಲಿ ಬಹಿರಂಗವಾಗಿತ್ತು. ಈ ಎಲ್ಲ ಘಟನೆ ಬಳಿಕ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಭಯಾನಕ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಸ್ಕಾನ್ ರಾಸ್ತೋಗಿ ಎಂಬ ಮಹಿಳೆ ಜೈಲು ವಾಸ ಅನುಭವಿಸಿದ್ದಳು.ಇದೀಗ ಆಕೆ ಗರ್ಭಿಣಿ ಎಂದು ದೃಢಪಟ್ಟಿದೆ ಎಂದು ವರದಿಯಾಗಿದೆ. ತನ್ನ ಪತಿ ಸೌರಭ್ ರಜಪೂತ್ ನನ್ನು ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಕೊಂದ ಆರೋಪದ ಮೇಲೆ ಮುಸ್ಕಾನ್ ಜೈಲು ಸೇರಿದ್ದರು.ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಏನಿದು ಘಟನೆ?
27 ವರ್ಷದ ಮುಸ್ಕಾನ್ ಮತ್ತು 25 ವರ್ಷದ ಸಾಹಿಲ್ ಶುಕ್ಲಾ ಇಬ್ಬರೂ ಮಾರ್ಚ್ 19, 2025 ರಿಂದ ಮೀರತ್ನ ಚೌಧರಿ ಚರಣ್ ಸಿಂಗ್ ಜಿಲ್ಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಮುಸ್ಕಾನ್ ಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ಈ ಪರಿಣಾಮ ಜೈಲು ಅಧಿಕಾರಿಗಳು ಆರೋಗ್ಯ ತಪಾಸಣೆಗೆ ಮುಂದಾದರು. ಏಪ್ರಿಲ್ 07, 2025 ರಂದು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡ ಜೈಲಿಗೆ ಭೇಟಿ ನೀಡಿ ಪರೀಕ್ಷೆ ನಡೆಸಿದಾಗ, ಮುಸ್ಕಾನ್ ಗರ್ಭಿಣಿ ಎಂದು ಖಚಿತವಾಯಿತು ಎನ್ನಲಾಗಿದೆ.ಇನ್ನು ಈಕೆಯ ಹೊಟ್ಟೆಯಲ್ಲಿರುವ ಮಗು ಗಂಡ ಸೌರಭ್ ನದ್ದಾ? ಅಥವಾ ಪ್ರಿಯಕರ ಸಾಹಿಲ್ ನದ್ದಾ? ಎಂಬ ಪ್ರಶ್ನೆ ಇದೀಗ ಎದ್ದಿದೆ.ಸದ್ಯ ಈ ಘಟನೆ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದ್ದು, ಮುಸ್ಕಾನ್ ನ ಗರ್ಭಧಾರಣೆಯ ಸುದ್ದಿ ಈ ಪ್ರಕರಣಕ್ಕೆ ಮತ್ತೊಂದು ಆಯಾಮವನ್ನು ತಂದಿದೆ.