ಕ್ರೈಂವೈರಲ್ ನ್ಯೂಸ್

ತಾಯಿಯ ಶವವಿಟ್ಟು ತಂಗಿಗಾಗಿ ಕಾಯುತ್ತಿರುವ ಅಣ್ಣನ ಕರುಣಾಜನಕ ಕಥೆ! ಮಗಳು ಮಾಡಿದ ಸಾಲವೀಗ ಹೆತ್ತಮ್ಮನಿಗೆ ಮುಳುವಾಯ್ತೇ?

203

ನ್ಯೂಸ್ ನಾಟೌಟ್: ತಾಯಿ ಶವವಿಟ್ಟುಕೊಂಡು ಅಣ್ಣನೊಬ್ಬ ತಂಗಿಯ ಬರುವಿಕೆಗಾಗಿ ಕಾಯುತ್ತಿರುವ ಮನಕಲಕುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ತಾಯಿ ಮೃತದೇಹ ನೋಡಲು ಬರುವಂತೆ ತಂಗಿಗೆ ಅಣ್ಣ ಮನವಿ ಮಾಡಿಕೊಂಡಿದ್ದಾನೆ. ತಾಯಿ ಮೃತಪಟ್ಟಿದ್ದಾಳೆ. ಎಲ್ಲೇ ಇದ್ದರೂ ಬೇಗ ಮನೆಗೆ ಬಾ ಎಂದು ಅಣ್ಣ ಮನವಿ ಮಾಡಿಕೊಂಡಿದ್ದಾನೆ.

ಸೋಮವಾರ ಜುಲೈ ೧ಂ ರಂದು ತಡರಾತ್ರಿ ಬೊಮ್ಮನಕೆರೆ ಗ್ರಾಮದ ಹೊನ್ನಮ್ಮ (55) ನಿಧನರಾಗಿದ್ದಾರೆ. ಹೊನ್ನಮ್ಮ ಅವರ ಮಗಳು ಹರಿಣಿ ಕೌಟುಂಬಿಕ ಕಲಹ ಹಿನ್ನೆಲೆ ಮನೆ ಬಿಟ್ಟು ತೆರಳಿದ್ದರು. ಗ್ರಾಮದ ವಿವಿಧ ಸ್ವಸಹಾಯ ಸಂಘಗಳಲ್ಲಿ ಐದು ಲಕ್ಷ ಸಾಲ‌ ಮಾಡಿಕೊಂಡಿದ್ದ ಹರಿಣಿ ಊರು ತೊರೆದಿದ್ದಾಳೆ. ಮಗಳು ಮಾಡಿದ ಸಾಲ ತೀರಿಸುವಂತೆ ಹೊನ್ನಮ್ಮನ ಮೇಲೆ ಸಾಲಗಾರರು ಒತ್ತಡ ಹಾಕುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಸಾಲಗಾರರ ಕಿರುಕುಳ ತಾಳಲಾರದೇ ಕಳೆದ ಮೂರು ದಿನಗಳಿಂದ ಹೊನ್ನಮ್ಮ ಊಟ, ತಿಂಡಿ ಬಿಟ್ಟಿದ್ದರು. ಸೋಮವಾರ ತಡರಾತ್ರಿ ತೀವ್ರ ಅಸ್ವಸ್ಥತೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದೀಗ ತಾಯಿ ಶವದ ಜೊತೆ ಕುಳಿತಿರುವ ಮಗ ತಂಗಿಗಾಗಿ ಕಾಯುತ್ತಿದ್ದಾನೆ. ಎಲ್ಲಿದ್ದರೂ ಮನೆಗೆ ಬರುವಂತೆ ಅಣ್ಣ ಕೇಳಿಕೊಳ್ಳುತ್ತಿದ್ದಾನೆ. ಕುಟುಂಬಸ್ಥರು ಸಹ ಹರಿಣಿಯ ಸಂಪರ್ಕಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

See also  ತಡರಾತ್ರಿ RSS ಕಾರ್ಯಾಲಯಕ್ಕೆ ನುಗ್ಗಿ ಹಲವರನ್ನು ವಶಕ್ಕೆ ಪಡೆದ ಪೊಲೀಸರು..! ಈ ಬಗ್ಗೆ ಬಿಜೆಪಿ ಹೇಳಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget