ಕ್ರೈಂವೈರಲ್ ನ್ಯೂಸ್

ಪುಟ್ಟ ಮಗುವನ್ನು ಕೆರೆಗೆ ಎಸೆದದ್ದೇಕೆ ತಂದೆ..! ತಾಯಿ ಇಲ್ಲದ ಮಕ್ಕಳಿಗೆ ಇದೆಂಥಾ ಶಿಕ್ಷೆ? ಪೊಲೀಸರು ಈ ಬಗ್ಗೆ ಹೇಳಿದ್ದೇನು?

172

ನ್ಯೂಸ್‌ ನಾಟೌಟ್‌: ತಂದೆಯೇ ತನ್ನ ಪುಟ್ಟ ಮಗನನ್ನು ಕೆರೆಗೆ ಎಸೆದು ಕೊಂದಿರುವ ಘಟನೆ ಮೈಸೂರಿನಲ್ಲಿ ಗುರುವಾರ ನಡೆದಿದೆ.

ಆರೋಪಿಯನ್ನು ಪಿರಿಯಾಪಟ್ಟಣ ಸಮೀಪದ ಮಾಕೋಡು ಗ್ರಾಮದ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಆರೋಪಿಗೆ ಮೂವರು ಮಕ್ಕಳಿದ್ದಾರೆ. ಮೊದಲ ಇಬ್ಬರು ಹೆಣ್ಣು ಮಕ್ಕಳಾಗಿದ್ದು, ಮೂರನೇ ಮಗುವಿನ ಹೆರಿಗೆಯ ಸಮಯದಲ್ಲಿ ಆತನ ಹೆಂಡತಿ ಲಕ್ಷ್ಮಿ ನಿಧನರಾಗಿದ್ದರು ಎನ್ನಲಾಗಿದೆ.

ಗಣೇಶ್ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ತಾಯಿ ಅಂಜನಮ್ಮ ಬಳಿ ಬಿಟ್ಟು ಮಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ನಂತರ, ಆತ ಹಳ್ಳಿಗೆ ಮರಳಿದ್ದ ಮತ್ತು ಅವರು ತಾಯಿಯೊಂದಿಗೆ ವಾಸಿಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ತಾಯಿಯೊಂದಿಗೆ ಜಗಳವಾಡಿ ಒಂದೂವರೆ ವರ್ಷದ ಮಗನನ್ನು ಮನೆಯಿಂದ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮಗುವನ್ನು ಕೆರೆಗೆ ಎಸೆದು ನಾಪತ್ತೆಯಾಗಿದ್ದ. ಗ್ರಾಮಸ್ಥರು ಕೆರೆಯಲ್ಲಿ ಮಗುವಿನ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಬೆಳವಣಿಗೆ ಬಗ್ಗೆ ತಿಳಿದ ನಂತರ, ಆರೋಪಿಯ ಅತ್ತೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತನೇ ಮಗುವನ್ನು ಕೊಂದಿರಬಹುದು ಎಂದು ಶಂಕಿಸಿದ್ದಾರೆ.
ಬುಧವಾರ ಪೊಲೀಸರು ಗಣೇಶ್‌ ನನ್ನು ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ. ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಕೆರೆಗೆ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ. ಆರೋಪಿ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಹಣ ಕೊಟ್ಟು ಯಾಮಾರಬೇಡಿ...ವಿಟ್ಲದಲ್ಲಿ ಮಹಿಳೆಯಿಂದ ಮಹಿಳೆಗೆ ಮಹಾವಂಚನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget