ಕಾಸರಗೋಡುಕ್ರೈಂವೈರಲ್ ನ್ಯೂಸ್

ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕೈಗೆ ತೆಂಗಿನಕಾಯಿ ಎಸೆದ ಮಂಗ..! ಕೈ ಮೂಳೆ ಮುರಿತ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಏನಾದರೂ ಉಪದ್ರ ಮಾಡಿದ್ರೆ ಅಣ್ಣ..ಅವನ ಕೋತಿ ಚೇಷ್ಠೆ ನೋಡು ಅಂತೇವೆ, ಆದರೆ ಇಲ್ಲೊಂದು ಕೋತಿ ಪಾತ್ರ ತೊಳೆಯುತ್ತಿದ್ದ ಮಹಿಳೆಯ ಕೈಯ ಮೇಲೆ ತೆಂಗಿನ ಕಾಯಿ ಎಸೆದು ಗಂಭೀರ ಗಾಯಗೊಳಿಸಿದೆ.

ಈ ಘಟನೆ ಕಾಸರಗೋಡಿನ ಮುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳತ್ತಿಂಗಲ್ ಎಂಬಲ್ಲಿ ನಡೆದಿದೆ. ಕೃಷ್ಣನ್ ನಾಯರ್ ಎಂಬುವರ ಪತ್ನಿ ಸಾವಿತ್ರಿ ಅವರು ಮನೆಯ ಅಂಗಳದಲ್ಲಿ ಪಾತ್ರೆ ತೊಳೆಯುತ್ತಿದ್ದರು. ಈ ವೇಳೆ ತೆಂಗಿನ ಮರದಿಂದ ಮಂಗ ತೆಂಗಿನ ಕಾಯಿ ಕಿತ್ತು ಎಸೆದಿದೆ. ಇದರಿಂದ ಸಾವಿತ್ರಿ ಅವರ ಕೈ ಮೂಳೆ ಮುರಿದಿದೆ, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ನಿರಂತರವಾಗಿ ಕೃಷಿ ನಾಶ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡುತ್ತಿವೆ ಎನ್ನುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

Click

https://newsnotout.com/2024/11/guruprasad-kananda-news-lawyer-gajadeesh-kannada-news-video/
https://newsnotout.com/2024/11/bantwal-kannada-news-bike-and-bus-collision-hospitalized/
https://newsnotout.com/2024/11/duplicate-document-creation-and-waqf-issue-bjp/
https://newsnotout.com/2024/11/online-gaming-kannada-news-guruprasad-about-director-and-jaggesh/

Related posts

ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಫೋಟೋ ಶೇರ್..! ತುಮಕೂರಿನ ಮಹಿಳೆಯ ಬೆನ್ನುಬಿದ್ದ ಒಡಿಶಾ ಪೊಲೀಸರು!

ಫೈನಾನ್ಸ್‌ ಕಂಪೆನಿ ಕಿರುಕುಳ:ಹೃದಯಾಘಾತದಿಂದ ವ್ಯಕ್ತಿ ಸಾವು ;4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ,ಅಸಲು ಕಟ್ಟುವಂತೆಯೂ ಒತ್ತಡ

ಅರ್ಜಿ ಹಾಕದಿದ್ರೆ ವಿದ್ಯುತ್‌ ಉಚಿತ ಇಲ್ಲ ಎಂದ ಸಚಿವ ಕೆ.ಜೆ.ಜಾರ್ಜ್! ಅರ್ಜಿ ಹಾಕಲು ಯಾವಾಗ ಕೊನೆಯ ದಿನಾಂಕ?