ವೈರಲ್ ನ್ಯೂಸ್ಸುಳ್ಯ

ಪ್ರಧಾನಿ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ತುಳುನಾಡಿನ ದೈವ ಚಾವಡಿಯಲ್ಲಿ ದೀಪಾರಾಧನೆ, ಶ್ರೀ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಯುವಕರ ತಂಡ ಪ್ರಾರ್ಥಿಸಿದ್ದೇನು..?

177

ನ್ಯೂಸ್ ನಾಟೌಟ್ : ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬವನ್ನು ಭಾನುವಾರ ದೇಶದಲ್ಲಿರುವ ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸಂಭ್ರಮಿಸಿ ಆಚರಿಸಿದ್ದಾರೆ. ಮೋದಿ ನೂರು ಕಾಲ ಬಾಳಲಿ ಎಂದು ದೇವಾಸ್ಥಾನಗಳಲ್ಲಿ ಪೂಜೆ ನಡೆದಿದೆ.

ಅಂತೆಯೇ ನಮ್ಮ ಯುವಕರ ತಂಡವೂ ಕೂಡ ಮೋದಿಗಾಗಿ ತುಳುನಾಡಿನ ಸತ್ಯ ದೈವ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸನ್ನಿಧಿಯಲ್ಲಿ ನಿಂತು ದೀಪಾರಾಧನೆ ಮಾಡಿ ಸುದ್ದಿಯಾಗಿದ್ದಾರೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ಯುವಕರ ತಂಡ ಇಂತಹದ್ದೊಂದು ಪೂಜೆ ಮಾಡಿದೆ. ಪ್ರಧಾನಿ ಮೋದಿ ಇನ್ನಷ್ಟು ಕಾಲ ದೇಶದ ಪ್ರಧಾನಿಯಾಗಿ ಮುನ್ನಡೆಯಲಿ. ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಜ್ವಲವಾಗುವಂತೆ ಮಾಡುವ ಶಕ್ತಿಯನ್ನು ಶ್ರೀ ವಿಷ್ಣು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಪ್ರಧಾನ ಪೂಜಾರಿಯಾಗಿರುವ ನಾರಾಯಣ ಬಾಲೆಂಬಿ ನೇತೃತ್ವದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಈ ವೇಳೆ ಕಲ್ಲುಗುಂಡಿಯ ಹಲವಾರು ಯುವಕರ ತಂಡ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

See also  ಏ11ರಿಂದ ಪೆರಾಜೆಯಲ್ಲಿ ಈಜೋಣ ಬನ್ನಿ.. ರಜೆಯ ಮಜಾ ಅನುಭವಿಸಲು ಇದು ಸಕಾಲ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget