ಕ್ರೈಂಬೆಂಗಳೂರುವೈರಲ್ ನ್ಯೂಸ್

ಮೊಬೈಲ್‌ ಕದ್ದು ಓಡುತ್ತಿದ್ದಾಗ ಕ್ಯಾಬ್‌ ಡಿಕ್ಕಿ..! ಈತನ ಸಂಬಂಧಿಕರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸ್ ಮನವಿ ಮಾಡಿದ್ದೇಕೆ? ಮುಂದೇನಾಯ್ತು..?

ನ್ಯೂಸ್ ನಾಟೌಟ್: ಬಸ್ಸಿಗೆ ಕಾಯುತ್ತಿದ್ದ ವೇಳೆ ಮಹಿಳೆಯ ಮೊಬೈಲ್ ಕದ್ದು ಪರಾರಿ ಆದ ಕಳ್ಳ ಕ್ಯಾಬ್‌ ಡಿಕ್ಕಿಯಾಗಿ ಕೊನೆಯುಸಿರೆಳೆದ ಬೆಂಗಳೂರಿನ ಘಟನೆ ಆರ್‌.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಅ.9ರಂದು ಬಳ್ಳಾರಿ ಸರ್ವೀಸ್‌ ರಸ್ತೆಯ ಹೆಬ್ಬಾಳ ಬಸ್ ನಿಲ್ದಾಣ ಬಳಿ ಸೋದಾಗಾರ ಮೆಹರಾಜ್‌ ಎಂಬುವರು ಬಸ್ಸಿಗೆ ಕಾಯುತ್ತಿದ್ದರು. ಆಗ ಅವರಿಂದ ಮೊಬೈಲ್‌ ಕಸಿದುಕೊಂಡು ಆರೋಪಿ ಪರಾರಿಯಾಗಿದ್ದಾನೆ.

ಈ ವೇಳೆ ಕ್ಯಾಬ್‌ ಡಿ* ಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾ* ಯಗೊಂಡಿದ್ದ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆರೋಪಿ ಉಸಿರುಚೆಲ್ಲಿದ್ದಾನೆ.

ಕೊನೆಯುಸಿರೆಳೆದ ವ್ಯಕ್ತಿ 40-45 ವರ್ಷ ವಯೋಮಾನದವನಾಗಿದ್ದು, 5.3 ಅಡಿ ಎತ್ತರವಿದ್ದಾನೆ. ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಮೃತನ ಎಡಭುಜದ ಮೇಲೆ ಕಪ್ಪು ಬಣ್ಣದ ಹುಟ್ಟು ಮಚ್ಚೆ ಇರುತ್ತದೆ.

ಈತನ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ದೂ.080-22943026, 22943027 ಅಥವಾ ಮೊ.94808 01931ಕ್ಕೆ ಕರೆ ಮಾಡುವಂತೆ ಆರ್‌,ಟಿ.ನಗರ ಸಂಚಾರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

Related posts

ಕುಸ್ತಿಪಟುಗಳು ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರದ ಕುರಿತು ಸಂಸದ ಹೇಳಿದ್ದೇನು? ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದದ್ದೇಕೆ?

ಪೊಲೀಸ್ ಮಾಹಿತಿದಾರನೆಂದು ನಂಬಿಸಿ ನಕ್ಸಲರಿಂದ ಗ್ರಾಮಸ್ಥನ ಕೊಲೆ..! ಕಳೆದೊಂದು ವರ್ಷದಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಆ ಪ್ರದೇಶದಲ್ಲಿ 68 ನಾಗರಿಕರು ಬಲಿ..!

ರೈಲಿನೊಳಗೆ ನಗ್ನವಾಗಿ ನುಗ್ಗಿದ ವ್ಯಕ್ತಿ..! ಗಾಬರಿಗೊಂಡು ಕಿರುಚಾಡಿದ ಮಹಿಳೆಯರು..! ಇಲ್ಲಿದೆ ವೈರಲ್ ವಿಡಿಯೋ