ಕರಾವಳಿ

ನಾಪತ್ತೆಯಾಗಿದ್ದ ಸಂಪಾಜೆಯ ವ್ಯಕ್ತಿಯನ್ನು ಕರೆತರಲು ಕೇರಳದತ್ತ ಹೊರಟ ಕುಟುಂಬ

331

ನ್ಯೂಸ್ ನಾಟೌಟ್ : ಕಳೆದ ಎಂಟು ತಿಂಗಳಿಂದ ಕೇರಳದ ಎರ್ನಾಂಕುಲದಲ್ಲಿ ಕಾಣೆಯಾಗಿದ್ದ ಸಂಪಾಜೆಯ ವ್ಯಕ್ತಿಯೊಬ್ಬರು ಇದೀಗ ಕೇರಳದ ಕೊಟ್ಟಾಯಂನ ಆಶ್ರಮವೊಂದರಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಮಾರ್ಚ್ ತಿಂಗಳಿನಿಂದ ಸಂಪಾಜೆಯಿಂದ ಕೇರಳಕ್ಕೆ ಹೋಗಿ ಕಾಣೆಯಾಗಿದ್ದ ಹಂಡನಮನೆ ಬೆಳ್ಯಪ್ಪ ಗೌಡರು ಕೇರಳದ ಕೊಟ್ಟಾಯಂನ ಆಶ್ರಮವೊಂದರಲ್ಲಿ ಪತ್ತೆಯಾಗಿದ್ದಾರೆ. ಮಾರ್ಚ್ ೧೨ ರಂದು ಕೇರಳಕ್ಕೆ ಹೋಗುತ್ತಿದ್ದ ಸಂಪಾಜೆ ಮೂಲದ ಸುಧಾಕರ ಎಂಬವರ ಲಾರಿಯಲ್ಲಿ ಕ್ಲೀನರ್ ಆಗಿ ಹೋಗಿದ್ದರು ,ಈ ವೇಳೆ ಎರ್ನಾಂಕುಲಂಮ್ ನಲ್ಲಿ ಕಾಣೆಯಾಗಿದ್ದರು. ಆತಂಕಗೊಂಡ ಕುಟುಂಬ ಸಾಕಷ್ಟು ಹುಡುಕಾಡಿದ ಬಳಿಕ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ವಿವರ ಸಿಗಲಿಲ್ಲ. ಆದರೆ ಇದೀಗ ಕೇರಳದ ಆಶ್ರಮವೊಂದರಲ್ಲಿ ಪತ್ತೆಯಾಗಿದ್ದಾರೆ ಎಂದು ಕೊಟ್ಟಾಯಂ ಪೊಲೀಸರು ತಿಳಿಸಿದ್ದಾರೆ. ಈ ಮಾಹಿತಿಯ ಪ್ರಕಾರ , ಕುಟುಂಬದವರು ಇಂದು ( ಮಂಗಳವಾರ) ಕೊಟ್ಟಾಯಂಗೆ ತೆರಳಿ ಅವರನ್ನು ಸಂಪಾಜೆಯತ್ತ ಕರೆದುಕೊಂಡು ಬರಲಿದ್ದಾರೆ ಎಂದು ಕುಟುಂಬ ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ.

See also  ವಿಟ್ಲ: ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ನೀಡದೇ ಪರಾರಿಯಾದ ಯುವಕರು!ಆಕ್ಟೀವಾ,ಪಿಕಪ್ ಗೆ ಡಿಕ್ಕಿ ಹೊಡೆದು ಸಿಕ್ಕಿ ಬಿದ್ದರು!ಆಕ್ಟಿವಾ ಸವಾರನಿಗೆ ಗಂಭೀರ ಗಾಯ
  Ad Widget   Ad Widget   Ad Widget   Ad Widget   Ad Widget   Ad Widget   Ad Widget