ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್

ಸುಬ್ರಹ್ಮಣ್ಯ: ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್..! ನಗ್ನ ವಿಡಿಯೋ ಚಿತ್ರೀಕರಿಸಿ ಲಕ್ಷ..ಲಕ್ಷಕ್ಕೆ ಬೇಡಿಕೆ ಇಟ್ಟವ ಸಿಕ್ಕಿಬಿದ್ದಿದ್ದು ಹೇಗೆ..?

217

ನ್ಯೂಸ್ ನಾಟೌಟ್: ಬಣ್ಣ ಬಣ್ಣಗಳ ರಂಗುರಂಗಿನ ಮಾತುಗಳಿಂದ ವಿವಾಹಿತ ಮಹಿಳೆಯನ್ನು ಮರಳು ಮಾಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆ ನಗ್ನ ವಿಡಿಯೋಗಳನ್ನು ಚಿತ್ರೀಕರಿಸಿ ಲಕ್ಷ..ಲಕ್ಷಕ್ಕೆ ಬೇಡಿಕೆ ಇಟ್ಟ ಸುಬ್ರಹ್ಮಣ್ಯ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ನಿವಾಸಿ ಪ್ರಶಾಂತ ಭಟ್ ಮಾಣಿಲ ಎಂದು ಗುರುತಿಸಲಾಗಿದೆ.

ಸಂತ್ರಸ್ತ ಮಹಿಳೆ ವಿವಾಹಿತೆಯಾಗಿದ್ದರು. ಗಂಡನ ಜೊತೆ ಜೀವನ ನಡೆಸಿಕೊಂಡಿದ್ದ ಅವರು ಪ್ರಾಯದ ಅಮಲಿನಲ್ಲಿ ದಾರಿ ತಪ್ಪಿದರು. ಗಂಡ ಇರುವಾಗಲೇ ಪರಸಂಗದ ಗೆಂಡೆತಿಮ್ಮನ ಬಣ್ಣ ಬಣ್ಣದ ಮಾತುಗಳಿಗೆ ಬೆರಗಾದರು. ಮಾತ್ರವಲ್ಲ ತನ್ನ ಯೌವ್ವನವನ್ನೇ ಅವನಿಗೆ ಅರ್ಪಿಸಿದರು. ಆದರೆ ಆ ಭೂಪ ಪಡೆದುಕೊಳ್ಳುವುದರ ಜೊತೆಗೆ ಖಾಸಗಿ ಕ್ಷಣದ ವಿಡಿಯೋಗಳನ್ನು ಕೂಡ ಚಿತ್ರಿಸಿಕೊಂಡಿದ್ದ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ.

ಇಷ್ಟೆಲ್ಲ ಆದ ಬಳಿಕ ಆಕೆಯ ಜೊತೆಗೆ ಹಣ ನೀಡುವಂತೆ ಪೀಡಿಸಿದ್ದ. ಹಣ ನೀಡದಿದ್ದರೆ ವಿಡಿಯೋಗಳನ್ನು ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದ. ಸಂತ್ರಸ್ತ ಮಹಿಳೆ ಆರಂಭದಲ್ಲಿ ಹಣ ನೀಡಿದ್ದರು. ಆದರೆ ಬರುಬರುತ್ತಾ ಈತನ ಕಾಟ ಜಾಸ್ತಿ ಆಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯ ಪತಿ ಕೂಡ ಪೊಲೀಸ್ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

ಪ್ರಶಾಂತ ಭಟ್ ಮಾಣಿಲ ಸಂತ್ರಸ್ತ ಮಹಿಳೆಯನ್ನು ಕ್ಲಬ್ ಹೌಸ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಸಂಗೀತ ಆಸಕ್ತಿ ಹೊಂದಿದ್ದ ಸಂತ್ರಸ್ತ ಮಹಿಳೆಯ ಪರಿಚಯವು 2020 ರಲ್ಲಿ ಆ್ಯಪ್ ಮೂಲಕ ನಡೆದಿತ್ತು. ಆಕೆ ಅಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ಇಬ್ಬರ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಆ ಬಳಿಕ ಇಬ್ಬರು ಪರಸ್ಪರ ಇಷ್ಟ ಪಟ್ಟು ಲೈಂಗಿಕ ಸಂಬಂಧ ಬಳಸುವ ತನಕ ಮುಂದುವರಿಯಿತು. 2023ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದ.

ಈ ಲಾಡ್ಜ್ ನಲ್ಲೇ ಆರೋಪಿಯು ಮಹಿಳೆಯ ಮೇಲೆ ಅ* ತ್ಯಾಚಾರ ಎಸಗಿದ್ದ. ಅಲ್ಲದೇ, ಅದೇ ಲಾಡ್ಜಿನಲ್ಲಿ ಫೆಬ್ರವರಿಯಲ್ಲೂ ಅ* ತ್ಯಾಚಾರ ಎಸಗಿದ್ದ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ವಿಡಿಯೋ ಕಾಲ್ ಮಾಡಿ ನಗ್ನ ದೃಶ್ಯಗಳನ್ನೂ ಸೆರೆ ಹಿಡಿದಿದ್ದಾನೆ. ಬಳಿಕ ಮಹಿಳೆಯಲ್ಲಿ ಹಣಕ್ಕೂ ಬೇಡಿಕೆ ಇಟ್ಟು ಒಮ್ಮೆ 25 ಸಾವಿರ ರೂ. ಪಡೆದಿದುಕೊಂಡಿದ್ದ.

ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಸಿ 7 ಲಕ್ಷ ರೂ.ಗೆ ಗಳಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೇ, ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದ. ಮಹಿಳೆ ಹಾಗೂ ಆಕೆಯ ಪತಿಯ ದೂರಿನ ಹಿನ್ನೆಲೆ ಕಾರವಾರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

See also  ತೆಲುಗು ಬಿಗ್ ಬಾಸ್​ ಗೆದ್ದ ಕನ್ನಡಿಗ..! ಮೈಸೂರು ಮೂಲದ ಯುವಕನಿಗೆ ಬಿಗ್ ಬಾಸ್ ಕಿರೀಟ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget