ಕ್ರೈಂವೈರಲ್ ನ್ಯೂಸ್

ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಮಗಳನ್ನು ಗಂಡನ ಮನೆಯಿಂದ ಅಪಹರಿಸಿದ ಪೋಷಕರು..! ಪೊಲೀಸರ ವಿಚಾರಣೆಯಲ್ಲಿ ವಧು ನೀಡಿದ ಟ್ವಿಸ್ಟ್ ಏನು?

213

ನ್ಯೂಸ್‌ ನಾಟೌಟ್‌: ಮದುವೆಯಾಗಿ ಒಂದೇ ತಿಂಗಳಲ್ಲೇ ಜೋಡಿ ದೂರ ಆಗಿದ್ದರು, ಈ ಕುರಿತು ಆಕೆಯ ಗಂಡ ಠಾಣೆಗೆ ದೂರು ನೀಡಿದ್ದ. ಇದೀಗ ಗದಗ ಪೊಲೀಸರ ಕಾರ್ಯಾಚರಣೆಯಿಂದ ಜುಲೈ 14 ರಂದು ಹುಡಗಿಯನ್ನು ಮತ್ತೆ ಗಂಡನ ಮನೆಗೆ ಸೇರಿಸಿದ್ದಾರೆ. ನಿನ್ನೆ ಅದ್ಧೂರಿ ರಿಸೆಪ್ಷನ್ ಕೂಡ ನಡೆದಿದ್ದು, ಸಪ್ತಪದಿ ತುಳಿದಿರುವ ಈ ಜೋಡಿಯ ಹೆಸರು ಅಭಿಷೇಕ್- ಐಶ್ವರ್ಯ ಎನ್ನಲಾಗಿದೆ.

ಗದಗ ನಗರದ ಡಿಸಿ ಮಿಲ್ ಪ್ರದೇಶದ ಯುವಕ ಅಭಿಷೇಕ್ ಎಂಬವರು ಹುಬ್ಬಳಿ ನಿವಾಸಿಯಾಗಿರುವ ಐಶ್ವರ್ಯಳನ್ನ ಕಳೆದ ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ನೋಡಿ ಹುಡುಗಿ ಪರಿಚಯವಾಗಿದ್ದಳು. ಅಂದು ಆರಂಭವಾದ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿ, ಕುಟುಂಬಸ್ಥರಿಗೆ ಪ್ರೀತಿಯ ವಿಷಯ ತಿಳಿಸಿದ್ದಾರೆ. ಹುಡುಗನ ಮನೆಯವರು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ, ಹುಡುಗಿ ಮನೆಯವರು ಮದುವೆ ನಿರಾಕರಣೆ ಮಾಡಿದ್ದರು ಎನ್ನಲಾಗಿದೆ.
ಹುಡುಗಿ ಮನೆಯವರ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿ, 2023 ಜೂನ್ 23 ರಂದು ಗದಗನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಿದ್ದಾರೆ. ಆದಾದ ಮೇಲೆ ಹೊಸ ಜೀವನ ನಡೆಸಬೇಕೆಂದು ಹುಡುಗ ಹಾಗೂ ಹುಡುಗಿ ಗದಗನಲ್ಲಿ ವಾಸ ಮಾಡುತ್ತಿದ್ದರು.

ಆದರೆ, ಜುಲೈ 12 ರಂದು ಡಿಸಿ ಮಿಲ್ ಪ್ರದೇಶದ ಹುಡಗನ ಮನೆಗೆ ನುಗ್ಗಿದ ಐಶ್ವರ್ಯ ಪೋಷಕರು ಸೇರಿದಂತೆ ಅವರ ಸಹಚರರು ಆಕೆಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರಂತೆ ಎಂದು ಪತಿ ಅಭಿಷೇಕ್ ಮಹಿಳಾ ಠಾಣೆಗೆ ದೂರು ನೀಡಿದ್ದ.

ಎಸ್ಪಿ ಬಿ ಎಸ್ ನೇಮಗೌಡ ಈ ಪ್ರಕರಣದ ತನಿಖೆಗೆ ಕೂಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಮಹಿಳಾ ಪೊಲೀಸರು ಹುಬ್ಬಳ್ಳಿಗೆ ಹೋಗಿ ಹುಡುಗಿಯನ್ನು ವಿಚಾರಣೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆದರೆ, ಐಶ್ವರ್ಯ ಪೊಲೀಸ್ ವಿಚಾರಣೆಯಲ್ಲಿ ತಾಯಿಯ ಕರೆ ಹಿನ್ನಲೆಯಲ್ಲಿ ನಾನೆ ಹೋಗಿದ್ದೇನೆ. ನನ್ನ ಯಾರೂ ಕಿಡ್ನ್ಯಾಪ್ ಮಾಡಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾಳೆಂದು ಎಸ್ಪಿ ಹೇಳಿದ್ದಾರೆ.

See also  ಹಿಂದೂ ಪೈರ್ ಬ್ರಾಂಡ್ ಶಾಸಕ ಯತ್ನಾಳ್‌ ಗೆ ಚಿಕಿತ್ಸೆ ನೀಡಿದ್ದು ಮುಸ್ಲಿಂ ಡಾಕ್ಟರ್! "ನನಗೆ ಮುಸ್ಲಿಂ ಓಟು ಬೇಡ" ಎಂದಿದ್ದ ಶಾಸಕನ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget