ಕರಾವಳಿವೈರಲ್ ನ್ಯೂಸ್

ಈ ಮದುವೆಯಲ್ಲಿ ವಧು-ವರ ಇಬ್ಬರೂ ಇರ್ತಾರೆ..ಆದ್ರೆ ಕಾಣಿಸಲ್ಲ..! ಏನಿದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಡೆಯುವ ಪ್ರೇತಾತ್ಮಗಳ ವಿಚಿತ್ರ ವಿವಾಹ..?

191

ಈ ಆಚರಣೆಗೂ ಇದೆಯಾ ವೈಜ್ಞಾನಿಕ ಹಿನ್ನೆಲೆ?

ನ್ಯೂಸ್ ನಾಟೌಟ್: ತುಳುನಾಡು ತನ್ನ ವೈವಿಧ್ಯತೆ ಮತ್ತು ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ವಿಶಿಷ್ಟವಾದ ಮದುವೆಯ ಆಚರಣೆಯೊಂದು ನಡೆಯುತ್ತದೆ ಅದೇ ಮೃತ ಪ್ರೇತಾತ್ಮಗಳ ವಿವಾಹ. ಇತ್ತೀಚೆಗೆ ಚೀನಾದ ಒಂದು ಹಳ್ಳಿಯಲ್ಲಿ ಈ ಆಚರಣೆ ಬಗ್ಗೆ ಸುದ್ದಿಯಾಗಿತ್ತು ಆದರೆ ನಮ್ಮ ತುಳುನಾಡಿನಲ್ಲೂ ಇಂತಹ ವಿಶಿಷ್ಟ ಆಚರಣೆಯೊಂದಿದೆ.

ದಕ್ಷಿಣ ಕನ್ನಡ (Dakshina Kannada) ಹಾಗೂ ಉಡುಪಿ (Udupi) ಜಿಲ್ಲೆಗಳಲ್ಲಿ ವರ್ಷಕ್ಕೊಂದು ಬಾರಿ ಇಂತಹ ಮದುವೆಗಳು ಕೆಲವು ಮನೆಗಳಲ್ಲಿ ನಡೆಯುತ್ತವೆ. ತುಳು ಮಾಸ ಆಟಿ (ಆಷಾಢ) ಅಂದ್ರೆ ಯಾವುದೇ ಶುಭಕಾರ್ಯಗಳು ಕರಾವಳಿ ಭಾಗದಲ್ಲಿ ನಡೆಯದ ಕಾಲದಲ್ಲಿ ಕುಟುಂಬದಲ್ಲಿ ಯಾರಾದ್ರೂ ಮದುವೆಯಾಗದೇ ಅಕಾಲಿಕವಾಗಿ ಮೃತಪಟ್ಟಿದ್ದರೆ ಅಂತವರ ಮದುವೆ ಮಾಡೋ ಸಂಪ್ರದಾಯ ಇದೆ.

ಇಲ್ಲೂ ನಡೆದಿರೋದು ಅಂತಹದೇ ಒಂದು ಮದುವೆಯ ಸಂಪ್ರದಾಯ ವರದಿಯಾಗಿದೆ. ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ವಧುವಿನ ಕುಟುಂಬ ಹಾಗೂ ಉಳ್ಳಾಲ (Ullala) ತಾಲೂಕಿನ ಕೋಣಾಜೆ ಸಮೀಪದ ಬೊಳ್ಮ ಎಂಬಲ್ಲಿಯ ವರನ ಕುಟುಂಬದ ನಡುವೆ ಮದುವೆ ಸಂಬಂಧ ಏರ್ಪಟ್ಟಿದೆ.

ಬಂಟ್ವಾಳ ತಾಲೂಕಿನ ವಗ್ಗದ ಮಾಂಗಜೆ ಎಂಬಲ್ಲಿಯ ಸಂಜೀವ ಪೂಜಾರಿಯವರ ಮಗಳು ವಿಶಾಲಾಕ್ಷಿ 2 ವರ್ಷದ ಮಗುವಾಗಿದ್ದಾಗ ಅಂದ್ರೆ ಸರಿ ಸುಮಾರು 35 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇತ್ತ ಉಳ್ಳಾಲದ ಕೊಣಾಜೆ ಸಮೀಪದ ಬೊಳ್ಮ ಗ್ರಾಮದ ಲಕ್ಷ್ಮಣ ಪೂಜಾರಿಯವರ ಪುತ್ರ ಧರಣೇಶ್ ಕಳೆದ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಅವರಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ.

ಹೃದಯದ ತೊಂದರೆ ಇದ್ದ ಕಾರಣ ಧರಣೇಶ್ ಅವರಿಗೆ ಮದುವೆ ಮಾಡುವ ಬಗ್ಗೆ ಮನೆಯವರು ಯೋಚನೆ ಮಾಡಿರಲಿಲ್ಲ. ಆದರೆ ಧರಣೇಶ್ ಗೆ ಮದುವೆ ಆಗಬೇಕು ಅನ್ನೋ ಆಸೆ ಇತ್ತಾದ್ರೂ ಹೃದಯದ ಕಾಯಿಲೆಯಿಂದ ಗುಣಮುಖವಾಗದೆ ಮೃತಪಟ್ಟಿದ್ದರು ಎನ್ನಲಾಗಿದೆ. ವಧುವಿನ ಕಡೆಯವರಿಗೆ ಜ್ಯೋತಿಷ್ಯದಲ್ಲಿ ಕಂಡು ಬಂದಂತೆ ವಿಶಾಲಕ್ಷಿಗೆ ಮದುವೆ ಮಾಡಬೇಕಾಗಿತ್ತು. ಈ ವೇಳೆ ವರಾನ್ವೇಶಣೆ ನಡೆಸಿದಾಗ ಧರಣೇಶನ ಸಂಬಂಧ ಸಿಕ್ಕಿ ಎಲ್ಲಾ ಮಾತುಕತೆ ನಡೆಸಿ ಸಂಪ್ರದಾಯದಂತೆ ಮದುವೆ ಕಾರ್ಯ ಮಾಡಲಾಗಿದೆ.

ತುಳುನಾಡಿನಲ್ಲಿ ಆಷಾಡ ಮಾಸದಲ್ಲಿ ನಡೆಯೋ ಈ ಪ್ರೇತಗಳ ಮದುವೆ ವಿಚಿತ್ರ ಅನಿಸಿದ್ರೂ, ಬಹಳಷ್ಟು ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಕ್ಕಿಲ್ಲದೆ ಇದ್ರೆ ಕುಟುಂಬದ ಸದಸ್ಯರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತೆ. ಮದುವೆಯಾಗಲು ಹೊರಟ ಯುವಕ ಯುವತಿಯರಿಗೂ ನಾನಾ ತೊಂದರೆ ಎದುರಾಗುತ್ತದೆ.

ಈ ರೀತಿ ಕುಟುಂಬದಲ್ಲಿ ಕಾಣಿಸುವ ಸಮಸ್ಯೆಗಳಿಗೆ ಜ್ಯೋತಿಷ್ಯದಲ್ಲಿ ಕಂಡು ಬರುವ ಪರಿಹಾರವಾಗಿ ಈ ರೀತಿಯ ಮದುವೆಗಳು ನಡೆಯುತ್ತದೆ.
ಇಲ್ಲಿ ನಾವು ಈ ವಿವಾಹದಿಂದ ಕೇವಲ ಪ್ರೇತಾತ್ಮಗಳ ಸಂತೃಪ್ತಿ ಮಾತ್ರವಲ್ಲದೆ, ಮನೆಯೊಂದರಲ್ಲಿ ಕುಟುಂಬಸ್ಥರು ಕಂಡಿದ್ದ ಕನಸು, ಅಥವಾ ಹಿರಿಯರಿಗೆ ತನ್ನ ಮಗ ಮಗಳ ಶುಭ ಕಾರ್ಯ ನೊಡುವ ಆಸೆ ಮನಸ್ಸಲ್ಲೇ ನೋವಾಗಿ ಉಳಿಯುವುದನ್ನು ತಪ್ಪಿಸಲು ಮತ್ತು ಮಾನಸಿನ ಅಸ್ವಸ್ಥತೆಯನ್ನು ದೂರ ಮಾಡಲು ಇದೊಂದು ವೈಜ್ಞಾನಿಕ ಆಚರಣೆಯೂ ಹೌದು.

  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget