ಕರಾವಳಿಸುಳ್ಯ

ಮರ್ಕಂಜ: ಸಿಡಿಲು ಬಡಿದು ಇನ್ವರ್ಟರ್ ಛಿದ್ರ..ಛಿದ್ರ..! ಅಷ್ಟಕ್ಕೂ ಆಗಿದ್ದೇನು..?

165

ನ್ಯೂಸ್ ನಾಟೌಟ್: ಸಿಡಿಲು ಬಡಿದು ಇನ್ವರ್ಟರ್ ಛಿದ್ರ..ಛಿದ್ರ ಆಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜದಲ್ಲಿ ಮಂಗಳವಾರ ನಡೆದಿದೆ.

ಮರ್ಕಂಜ ಗ್ರಾಮದ ಸೇವಾಜೆಯಲ್ಲಿ ಗಂಗಾಧರ ಗೌಡ ಎಂಬವರ ಮನೆಯಲ್ಲಿ ಸಿಡಿಲು ಬಡಿದು ಇನ್ವರ್ಟರ್ ಛಿದ್ರ ವಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇತ್ತೀಚೆಗೆ ನೆಲ್ಲೂರು ಕೆಮ್ರಾಜೆಯಲ್ಲಿ ಮಹಿಳೆಯೊಬ್ಬರು ಇನ್ವರ್ಟರ್ ಸ್ವಿಚ್ ಆಫ್ ಮಾಡುವಾಗ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಇನ್ನೂ ಮಾಸುವ ಮೊದಲೇ ಇನ್ವರ್ಟರ್ ಛಿದ್ರಗೊಂಡಿರುವ ಘಟನೆ ಸಹಜವಾಗಿಯೇ ಆತಂಕ ಮೂಡಿಸಿದೆ. ಮಳೆಗಾಲದ ಸಂದರ್ಭದಲ್ಲಿ ಇನ್ವರ್ಟರ್ ಬಳಸುವ ಜನರು ಹೆಚ್ಚು ಜಾಗರೂಕರಾಗಿರಿ ಅನ್ನೋದು ನ್ಯೂಸ್ ನಾಟೌಟ್ ಕಳಕಳಿಯಾಗಿದೆ.

See also  ಸಂಪಾಜೆ: ಇಂದು ನಾಳೆ ಶಿರಾಡಿಭೂತ ಒಂಟಿ ನೇಮೋತ್ಸವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget