ದಕ್ಷಿಣ ಕನ್ನಡ

ಮರ್ಕಂಜ: ಬಸ್ ಅಡ್ಡಗಟ್ಟಿ ಕಾಡಾನೆಗಳ ಪುಂಡಾಟ..!, ರಾತ್ರಿ ಬಸ್ ನಿಲ್ಲಿಸಿ ಬುದ್ಧಿವಂತಿಕೆಯಿಂದ ಲೈಟ್ ಆಫ್ ಮಾಡಿದ ಚಾಲಕ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡಾನೆಯ ಉಪಟಳ ತೀರ ಹೆಚ್ಚಾಗುತ್ತಿದೆ. ಅದರಲ್ಲೂ ಸುಳ್ಯ ಸುತ್ತಮುತ್ತ ಕಾಡಾನೆಗಳು ನಿರಂತರವಾಗಿ ನಗರದತ್ತ ನುಗ್ಗಿ ಬರುತ್ತಿವೆ. ಮಾತ್ರವಲ್ಲ ಕೃಷಿಕರಿಗೆ ನಿತ್ಯ ಉಪಟಳವನ್ನು ನೀಡುತ್ತಿದೆ. ಇದೀಗ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ಅಡಚಣೆ ಉಂಟು ಮಾಡುತ್ತಿವೆ.

ಸುಳ್ಯ ತಾಲೂಕಿನ ಮರ್ಕಂಜದ ಬೊಮ್ಮಾರು ಹಾಗೂ ದೊಡ್ಡತೋಟದ ರಸ್ತೆಯ ನಡು ದಾರಿಯಲ್ಲಿ ಸುಳ್ಯದ ಎಸ್ ಎಂ ಟ್ರಾವೆಲ್ಸ್ ಬಸ್ ಪ್ರಯಾಣಿಕರನ್ನು ಇಳಿಸಿ ವಾಪಸ್ ಬರುತ್ತಿರುವಾಗ ಸೋಮವಾರ ರಾತ್ರಿ ೭.೩೦ ರ ಸಂದರ್ಭ ಮೂರು ಕಾಡಾನೆಗಳು ಬಸ್ ಗೆ ಅಡ್ಡಲಾಗಿ ರಸ್ತೆಯಲ್ಲಿ ನಿಂತಿದ್ದವು, 20 ನಿಮಿಷ ಬಸ್ ಅನ್ನು ಮುಂದಕ್ಕೆ ಹೋಗುವುದಕ್ಕೆ ಕಾಡಾನೆಗಳು ಬಿಡಲಿಲ್ಲ. ಚಾಲಕ ಹಾಗೂ ಕಂಡೆಕ್ಟರ್ ಮಾತ್ರ ಬಸ್ ನಲ್ಲಿದ್ದರು. ಗಾಬರಿಗೊಳಗಾದ ಅವರು ಬಸ್ ಲೈಟ್ ಆಫ್ ಮಾಡಿ ಸುಮ್ಮನೆ ಕುಳಿತುಕೊಂಡರು, ಸುಮಾರು 20 ನಿಮಿಷದ ಬಳಿಕ ಕಾಡಾನೆಗಳು ಸ್ಥಳದಿಂದ ತೆರಳಿದವು ಎಂದು ತಿಳಿದು ಬಂದಿದೆ.

Related posts

ಮಂಗಳೂರು: ಶಾಲೆಯ ಕಾಂಪೌಂಡ್ ಕುಸಿದು 7 ವರ್ಷದ ವಿದ್ಯಾರ್ಥಿನಿ ಮೃತ್ಯು..! ಇಲ್ಲಿದೆ ಸಂಪೂರ್ಣ ಮಾಹಿತಿ

ಉಪ್ಪಿನಂಗಡಿ: ನಡು ರಸ್ತೆಯಲ್ಲೇ ಎರಡು ಕಾರು ಪಾರ್ಕ್ ಮಾಡಿ ಸಂತೆಗೆ ಹೋದ ಅಣ್ತಮ್ಮ..!, ಅರ್ಧಗಂಟೆ ಕಾದು..ಕಾದು ಎರಡು KSRTC ಸಿಟಿ ಬಸ್ ನಲ್ಲಿದ್ದ ಜನ ಸುಸ್ತೋ…ಸುಸ್ತು..!

ಪುತ್ತೂರು ಮತ್ತು ಬೆಳ್ತಂಗಡಿಗೆ ಬರಲಿದ್ದಾರೆ ಅಣ್ಣಾಮಲೈ ಮತ್ತು ಬಿ.ವೈ ವಿಜಯೇಂದ್ರ, ಇಲ್ಲಿದೆ ಸಂಪೂರ್ಣ ಮಾಹಿತಿ