Latestರಾಜಕೀಯರಾಜ್ಯ

ಮಾರ್ಚ್ 7 ರಂದು ಕರ್ನಾಟಕ ಬಜೆಟ್ ಮಂಡನೆ, ಸಿಎಂ ಸಿದ್ದರಾಮಯ್ಯ ಘೋಷಣೆ

536
Spread the love

ನ್ಯೂಸ್ ನಾಟೌಟ್: ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡಿಸೋದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ರೈತ ಮುಖಂಡರ ಜೊತೆ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಸಿಎಂ, ಮಾರ್ಚ್ 3 ರಿಂದ ಅಧಿವೇಶನ ಪ್ರಾರಂಭವಾಗಲಿದೆ. ಮಾರ್ಚ್ 3 ರಂದು ರಾಜ್ಯಪಾಲರು ಜಂಟಿ ಸದನವನ್ನ ಉದ್ದೇಶಿ ಮಾತನಾಡಲಿದ್ದಾರೆ. ಮಂಗಳವಾರ, ಬುಧವಾರ ಮತ್ತು ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾರ್ಚ್ 7 ರಂದು ಬಜೆಟ್ ಮಂಡನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲಿನ ಟಾಯ್ಲೆಟ್‌ ನಲ್ಲಿ ಸಿಕ್ಕ ಖೋಟಾನೋಟುಗಳನ್ನು ಬದಲಾಯಿಸಲು ಬಂದಿದ್ದ ಆರೋಪಿಗಳು..! ಅವರ ಮನೆ ಹುಡುಕಿ ಪಶ್ಚಿಮ ಬಂಗಾಳಕ್ಕೆ ತೆರಳಿದ ಪೊಲೀಸರು..!

ಬಜೆಟ್‌ ಮಂಡಿಸಿದ ಬಳಿಕ ಅದರ ಮೇಲೆ ಚರ್ಚೆ ನಡೆದು ಮಾರ್ಚ್ ಕೊನೆಯಲ್ಲಿ ಉತ್ತರ ಕೊಡುತ್ತೇನೆ. ಅಧಿವೇಶನ ಎಷ್ಟು ದಿನ ನಡೆಯಬೇಕು ಅಂತ ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

 

See also  ಕುರಿ- ಮೇಕೆ ಮಾಂಸ ಮಾರಾಟ ಮಳಿಗೆ ಆರಂಭಿಸಲಿದೆಯಾ ಸರ್ಕಾರ? ಏನಿದು ಹೈಟೆಕ್ ಕಸಾಯಿಖಾನೆ? ಕಾಂಗ್ರೆಸ್ ಎಂಎಲ್‌ಸಿ ಟಿಬಿ ಜಯಚಂದ್ರ ಈ ಬಗ್ಗೆ ಹೇಳಿದ್ದೇನು?
  Ad Widget   Ad Widget   Ad Widget