ಕರಾವಳಿವೈರಲ್ ನ್ಯೂಸ್

ರಾತ್ರೋ ರಾತ್ರಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ವರ್ಗಾವಣೆ, ಜನಸಾಮಾನ್ಯ ಅಸಮಾಧಾನಕ್ಕೆ ಕಾರಣವೇನು..?

190

ನ್ಯೂಸ್ ನಾಟೌಟ್: ರಾತ್ರೋ ರಾತ್ರಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ವರ್ಗಾವಣೆಯಾಗಿದ್ದು ಇದರ ಹಿಂದೆ ಡ್ರಗ್ಸ್ ಮಾಫಿಯಾ ಕೈವಾಡವಿದೆ ಎಂದು ಜನ ಸಾಮಾನ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ಮಾಫಿಯಾದ ವಿರುದ್ಧ ಕುಲದೀಪ್ ಜೈನ್ ಸಮರ ಸಾರಿದ್ದರು. ಸಮಾಜ ಘತುಕ ಶಕ್ತಿಗಳ ವಿರುದ್ಧ ಸಮರ ಸಾರಿದ್ದೇ ಕುಲದೀಪ್ ಜೈನ್ ವರ್ಗಾವಣೆಗೆ ಕಾರಣವಾಯ್ತಾ..? ಅನ್ನುವ ಅನುಮಾನಗಳು ಈಗ ವ್ಯಕ್ತವಾಗುತ್ತಿದೆ.

ಸಾರ್ವಜನಿಕ ವಲಯದಲ್ಲಿ ಹೀಗೊಂದು ಚರ್ಚೆ ಆರಂಭವಾಗಿದೆ. ಕುಲದೀಪ್ ಜೈನ್ ವರ್ಗಾವಣೆ ವಿರುದ್ಧ ಶಾಸಕ ವೈ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಡ್ರಗ್ಸ್ ವಿರುದ್ಧ ಚಳುವಳಿ ಮಾಡಿದ್ದ ಅಧಿಕಾರಿ ಕುಲದೀಪ್ ಜೈನ್ , ಎಲ್ಲಾ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ರು, ಡ್ರಗ್ ಡೀಲರ್ಸ್ ಗಳನ್ನ ಹದ್ದು ಬಸ್ತಿಗೆ ತರುತ್ತಿದ್ದರು.

ಕಮಿಷನರ್ ವರ್ಗಾವಣೆಯಿಂದ ಡ್ರಗ್ಸ್ ವಿರುದ್ಧ ಹೊರಾಡುವ ಅಧಿಕಾರಿಗಳ ಮಾನಸಿಕ ಸ್ಟೈರ್ಯ ಕುಗ್ಗುವಂತಾಗಿದೆ. ಸರಕಾರ ಏಕಾಏಕಿ ವರ್ಗಾವಣೆ ಮಾಡುವ ಮುನ್ನ ಅದರ ಪರಿಣಾಮಗಳ ಬಗ್ಗೆ ಅವಲೋಕಿಸಬೇಕು. ನಮಗೂ ಜನರಿಂದ ನಿರಂತರವಾಗಿ ಕರೆಗಳು ಬರುತ್ತಿದೆ. ಡ್ರಗ್ಸ್ ವಿರುದ್ಧ ಹೋರಾಡುವ ಅಧಿಕಾರಿಗಳ ವರ್ಗಾವಣೆ ಯಾಕಾಗುತ್ತಿದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಡ್ರಗ್ಸ್ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡಬೇಕು, ಅದು ಬಿಟ್ಟು ಈ ರೀತಿ ಟ್ರಾನ್ಸ್ಫರ್ ಮಾಡಿದ್ರೆ ಅವರ ಮಾನಸಿಕ ಸ್ಟೈರ್ಯ ಕುಗ್ಗುತ್ತದೆ ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ಹರಿಸಬೇಕು
ಕೇವಲ ಡ್ರಗ್ಸ್ ವಿರುದ್ಧದ ಹೋರಾಟ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು, ಡ್ರಗ್ ಮಾಫಿಯಾದ ಹಿಂದಿರುವವರಿಂದಲೇ ಈ ವರ್ಗಾವಣೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ ಎಂದು ತಿಳಿಸಿದರು.

See also  'ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು ನಾನು ಮಠದ ಹುಡುಗ, ನಾನು ಜೆಡಿಎಸ್ ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ', ಸಚಿವ ಜಮೀರ್ ಅಹ್ಮದ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget