ಕರಾವಳಿ

ತಂಗಿಯನ್ನು ಚುಡಾಯಿಸಿದ ಮೂವರು ಪುಂಡರಿಗೆ ಹಿಗ್ಗಾಮುಗ್ಗಾ ಥಳಿಸಿದ ಅಣ್ಣ

816

ಮಂಗಳೂರು: ಮದುವೆ ಮನಗೆ ಬಂದ ಮೂವರು ಯುವಕರು ಯುವತಿಯೊಬ್ಬಳನ್ನು ಚುಡಾಯಿಸಲು ಹೋಗಿ ಹುಡುಗಿಯ ಅಣ್ಣನ ಕೈಯಿಂದ ಬಿಸಿಬಿಸಿ ಕಜ್ಜಾಯ ತಿಂದ ಘಟನೆ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಿನ್ನೆ ನಡೆದಿದೆ.

ಮಂಗಳೂರಿನಲ್ಲಿ ನಡೆದಿದ್ದ ಮದುವೆ ಸಮಾರಂಭದ ವೇಳೆ ವರನ ಕಡೆಯಿಂದ ಬಂದ ಮೂವರು ಹುಡುಗರು ವಧುವಿನ ಕಡೆಯ ಯುವತಿಯನ್ನು ಚುಡಾಯಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವತಿ ಸಹೋದರ ಚುಡಾಯಿಸಿದವರಿಗೆ ಹಲ್ಲೆ ನಡೆಸಿದ್ದು ಇದರಿಂದ ಗಲಾಟೆ ಜೋರಾಗಿ ನಡೆದಿದೆ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

See also  ಸುಳ್ಯ:ಡಾ.ಕೆ.ವಿ.ಜಿಯವರ 95ನೇ ಹುಟ್ಟು ಹಬ್ಬದ ಸ್ಮರಣಾರ್ಥ ಹಾನಿಗೀಡಾದ ಮನೆಗೆ ಹಣ ಹಸ್ತಾಂತರ,ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ) ಸುಳ್ಯ ವತಿಯಿಂದ ಕಾರ್ಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget