ಕರಾವಳಿರಾಜ್ಯ

‘ಚಿಂತೆಯಿಂದ ಹೊರಬರಲು ದೇವರ ಮೊರೆ ಹೋಗಿ’, ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಕರೆ

158

ನ್ಯೂಸ್ ನಾಟೌಟ್: ‘ಎಲ್ಲರಿಗೂ ಒಂದಲ್ಲ ಒಂದು ಚಿಂತೆ ಇದ್ದೇ ಇರುತ್ತದೆ. ಅದರ ಮುಕ್ತಿಗೆ ದೇವರ ಮೊರೆ ಹೋಗಬೇಕು’ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದ್ದಾರೆ. ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರ ತರಲಾದ ‘ಸಿರಿ ಸಂಪದ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಇದೇ ವೇಳೆ ದೀಪ ಬೆಳಗಿ ಉದ್ಘಾಟಿಸಿದ ಅರಕಲಗೂಡು ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. “ಈ ಶರೀರ, ನಾವು ಸಂಪಾದಿಸಿದ ಸಂಪತ್ತು ಯಾವುದೂ ಶಾಶ್ವತವಲ್ಲ. ಸಂಪಾದನೆಯ ಒಂದಂಶವನ್ನು ದೇವರಿಗೆ ಸಮರ್ಪಣೆ ಮಾಡಿದರೆ ಭಗವಂತನ ಸಾಕ್ಷಾತ್ಕಾರ ಸಿಗುತ್ತದೆ. ಅದೇ ರೀತಿ ಬಾಲ್ಯದಿಂದಲೇ ಸಿಕ್ಕಿದ ಸಂಸ್ಕಾರಯುತ ಶಿಕ್ಷಣ ಕೊನೆಯವರೆಗೂ ನಮ್ಮನ್ನು ಕಾಪಾಡುತ್ತದೆ. ಸಂಸ್ಕಾರ ಶಿಕ್ಷಣ ಎಲ್ಲಕ್ಕಿಂತಲೂ ದೊಡ್ಡದು ಎಂದು ತಿಳಿಸಿದರು.

See also  ಉಡುಪಿ: 'ಕಾಂತಾರ'-1 ಸಹನಟ ಕಪಿಲ್ ನದಿಗೆ ಈಜಲು ತೆರಳಿ ಸಾವು; ಹೊಂಬಾಳೆ ಫಿಲ್ಮ್ಸ್ ಪ್ರತಿಕ್ರಿಯಿಸಿ ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget