ಕ್ರೈಂ

ಮಂಗಳೂರು: ಜಲೀಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

332

ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ನಡೆದಿದ್ದ ಜಲೀಲ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಲಕ್ಷ್ಮೀಶ ದೇವಾಡಿಗ (28) ಎಂದು ಗುರುತಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ‌ ಪೊಲೀಸರು ಮೂವರನ್ನು ಬಂಧಿಸಿದ್ದರು. ಶೈಲೇಶ್ ಪೂಜಾರಿ, ಸವೀನ್ ಕಾಂಚಾನ್ , ಪವನ್ ಅಲಿಯಾಸ್ ಪಚ್ಚು ಅನ್ನು ಕಾಪುವಿನ ಲಾಡ್ಜ್ ನಲ್ಲಿ ಭಾನುವಾರ ರಾತ್ರಿ ಬಂಧಿಸಿದ್ದರು. ಪ್ರಕರಣ ಬೆಳಕಿಗೆ ಬಂದ ದಿನದಿಂದ ಮಂಗಳೂರಿನ‌ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಮಂಗಳೂರು ಸಮೀಪದ ಸುರತ್ಕಲ್ ಕೃಷ್ಣಾಪುರದಲ್ಲಿ ಶನಿವಾರ ಮಾರಕಾಸ್ತ್ರಗಳಿಂದ‌ ಇರಿದು ಭೀಕರವಾಗಿ ಜಲೀಲ್ ಹತ್ಯೆ ಮಾಡಲಾಗಿತ್ತು.

See also  ಹಾಸನಾಂಬ ದೇವಸ್ಥಾನದಲ್ಲಿ ಎಸಿಗೆ ಡಿಸಿ ಹೊಡೆದದ್ದೇಕೆ? ಏನಿದು ದೇಗುಲದೊಳಗೆ ಅಧಿಕಾರಿಗಳ ಜಗಳ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget