ಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ಮಂಗಳೂರು: ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದ ಮಹಿಳೆ..! ದೂರು ನೀಡಿದ ಬ್ಯಾಂಕ್ ಮ್ಯಾನೇಜರ್..!

246

ನ್ಯೂಸ್ ನಾಟೌಟ್: ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ನಗರದ ವೆಲೆನ್ಸಿಯಾ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ನವನೀತ್ ಕುಮಾರ್ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಭಾವತಿ ಪ್ರಭು ಎಂಬಾಕೆಯು 2024ರ ಅ.22ರಂದು ಬ್ಯಾಂಕ್‌ ಗೆ ಬಂದು ಚಿನ್ನಾಭರಣ ಅಡವಿಟ್ಟು 1.40 ಲ.ರೂ. , ಅ.25ರಂದು 1.41 ಲ.ರೂ, ನ.21ರಂದು 1.44 ಲ.ರೂ, ನ.25ರಂದು 1.46 ಲ.ರೂ. ನ.29ರಂದು 2.98 ಲ.ರೂ. ಡಿ.3ರಂದು 2.96 ಲ.ರೂ. ಹಂ-ಹಂತವಾಗಿ ಸಾಲ ಪಡೆದುಕೊಂಡಿದ್ದರು.

ಅವರು ಅಡಮಾನವಿರಿಸಿದ ಚಿನ್ನಾಭರಣಗಳನ್ನು ಅಪ್ರೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಹರೀಶ್ ರಾಜ್ ಪರಿಶೀಲಿಸಿ ಮೌಲ್ಯಮಾಪನ ಮಾಡಿದ ಅನಂತರ ಚಿನ್ನಾಭರಣಗಳನ್ನು ಗಿರವಿ ಇರಿಸಿಕೊಂಡು ಸಾಲ ಮಂಜೂರು ಮಾಡಲಾಗಿತ್ತು. ಡಿ.6ರಂದು ಪ್ರಭಾವತಿ ಪ್ರಭು ಮತ್ತೆ ಚಿನ್ನಾಭರಣ ಅಡವಿಡಲು ಬಂದಾಗ ಈ ಹಿಂದೆ ಅಪ್ರೈಸರ್ ಆಗಿದ್ದ ಹರೀಶ್ ರಾಜ್ ಇರಲಿಲ್ಲ. ಹಾಗಾಗಿ ರಾಜೇಶ್ ಎಂಬ ಅಪ್ರೈಸರ್‌ ನನ್ನು ಕರೆಯಿಸಿ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿಸಿದಾಗ ಆ ಚಿನ್ನಾಭರಣಗಳು ನಕಲಿಯಾಗಿದ್ದುದು ಗೊತ್ತಾಗಿದೆ.

ಇದರಿಂದ ಸಂಶಯ ಉಂಟಾಗಿ ಈ ಹಿಂದೆ ಪ್ರಭಾವತಿ ಪ್ರಭು ಅಡವಿಟ್ಟ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಅವುಗಳು ಕೂಡ ನಕಲಿಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಭಾವತಿ ಪ್ರಭು ಅವರನ್ನು ಬ್ಯಾಂಕ್ ಮ್ಯಾನೇಜರ್ ಪ್ರಶ್ನಿಸಿದಾಗ ಅಡಮಾನವಿರಿಸಿದ ಚಿನ್ನಾಭರಣ ಸಂಬಂಧಿ ಸುನೀಲ್ ಕೆ. ಅವರ ಪತ್ನಿಯದ್ದಾಗಿದೆ. ಸುನೀಲ್ ಕೆ ತಿಳಿಸಿದಂತೆ ಅವುಗಳನ್ನು ಅಡಮಾನವಿರಿಸಿ ಸಾಲ ಪಡೆದು ಆ ಮೊತ್ತವನ್ನು ಸುನಿಲ್ ಕೆ.ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ. ಅನಂತರ ಆರೋಪಿಗಳಾದ ಪ್ರಭಾವತಿ ಪ್ರಭು ಮತ್ತು ಸುನೀಲ್ ಕೆ. ಈ ಹಿಂದೆ ಪಡೆದ ಸಾಲದಲ್ಲಿ 2.85 ಲ.ರೂ.ಗಳನ್ನು ಬ್ಯಾಂಕ್‌ ಗೆ ಜಮೆ ಮಾಡಿದ್ದಾರೆ. 11.50 ಲ.ರೂ.ಗಳನ್ನು ಮರುಪಾವತಿಸಿಲ್ಲ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Click

https://newsnotout.com/2024/12/kannada-news-women-run-to-hospital-women-hd/
https://newsnotout.com/2024/12/couple-case-in-crow-issue-viral-news-tamilnadu-h/
https://newsnotout.com/2024/12/boat-collition-navy-coastal-guard-viral-news/
See also  ದರ್ಶನ್ ಪ್ರಕರಣ: ಡೆವಿಲ್ ಸಿನಿಮಾ ಡೈರೆಕ್ಟರ್ ಗೂ ಕಾದಿದೆಯಾ ಸಂಕಷ್ಟ..! ನಿರ್ದೇಶಕನಿಗೆ ನೋಟಿಸ್ ನೀಡಿದ್ದೇಕೆ ಪೊಲೀಸ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget