ಕಾಸರಗೋಡುಕ್ರೈಂ

ಮಂಗಳೂರು: ಹಿಂದೂ ಯುವತಿಯನ್ನು ಅಪಹರಿಸಿ ಲವ್ ಜಿಹಾದ್ ..!, ‘ಎರಡು ಮದುವೆಯಾಗಿರುವ ನಟೋರಿಯಸ್ ನಿಂದ ಮಗಳನ್ನು ರಕ್ಷಿಸಿ’ ಎಂದು ಕಣ್ಣೀರಿಡುತ್ತಿರುವ ತಂದೆ

159

ನ್ಯೂಸ್ ನಾಟೌಟ್: ಅನ್ಯಕೋಮಿನ ಕ್ರಿಮಿನಲ್ ಓರ್ವ ಹೆಣೆದ ಲವ್ ಜಿಹಾದ್ ಗೆ ಮಗಳು ಬಲಿಯಾದಳೆಂದು ತಂದೆಯೊಬ್ಬರು ಮಾಧ್ಯಮದವರ ಎದುರು ಕಣ್ಣೀರಿಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೊಹಮ್ಮದ್ ಅಶ್ಫಾಕ್ ಎಂಬಾತ ಮಗಳನ್ನು ಅಪಹರಿಸಿದ್ದಾನೆ. ಆತ ಈಗಾಗಲೇ ಎರಡು ಮದುವೆಯಾಗಿದ್ದಾನೆ. ಆತನ ಮೇಲೆ ಹಲವಾರು ಕ್ರಿಮಿನಲ್ ಕೇಸ್ ಗಳಿವೆ. ಇಂತಹ ವ್ಯಕ್ತಿ ನನ್ನ ಮಗಳನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಅಪಹರಿಸಿದ್ದಾನೆ. ಅಂತಹವನಿಂದ ನನ್ನ ಮಗಳನ್ನು ರಕ್ಷಿಸಿಕೊಡಬೇಕು ಎಂದು ಹಿಂದೂ ಯುವತಿಯ ತಂದೆ ವಿನೋದ್ ಕುಮಾರ್ ಕಣ್ಣೀರಿಟ್ಟಿದ್ದಾರೆ.

ಜೂ.6 ರಂದು ಮುಹಮ್ಮದ್ ಅಶ್ಫಾಕ್ ಜತೆ ಆಕೆಗೆ ಲವ್ ಇರುವುದು ಗೊತ್ತಾಯಿತು. ಆಕೆಗೆ ಬುದ್ದಿ ಮಾತು ಹೇಳಿ ಉಳ್ಳಾಲದ ಸಂಬಂಧಿಕರ ಮನೆಗೆ ಕಳುಹಿಸಿದ್ದೆವು. ಆದರೆ ಆತ ಅಲ್ಲಿಗೂ ಬಂದು ಜೂ.30 ರಂದು ಆಕೆಯನ್ನು ಅಪಹರಣ ಮಾಡಿದ್ದಾನೆ. ಮಗಳನ್ನು ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರ, ಮಂಗಳೂರು ಪೊಲೀಸರು ನನಗೆ ಸಹಾಯ ಮಾಡಬೇಕು. ಮಗಳು ಬಿಸಿಎ ಓದುತ್ತಿದ್ದಳು. ಆದರೆ ದ್ವಿತೀಯ ವರ್ಷದ ಡಿಗ್ರಿಗೆ ಶುಲ್ಕ ಕಟ್ಟುವುದಕ್ಕೆ ಹಣವಿರಲಿಲ್ಲ, ಹೀಗಾಗಿ ಶಿಕ್ಷಣ ಮೊಟಕುಗೊಳಿಸಿದ್ದಳು. ಬಳಿಕ ಎರಡು ತಿಂಗಳು ಕಾಸರಗೋಡಿ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಮಹಮ್ಮದ್ ಅಶ್ಫಾಕ್ ನ ಪರಿಚಯ ಆಗಿರಬೇಕು‌. ನಾನು ಅಲ್ಲಿನ ಜಮಾತ್ ಹೋಗಿ, ನನ್ನ ಮಗಳನ್ನು ಆತನಿಂದ ರಕ್ಷಿಸಿ ಕೊಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಮಗಳು ನಾಪತ್ತೆಯಾಗಿದ್ದ ಬಗ್ಗೆ ಯುವತಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಮಗಳನ್ನು ಅಶ್ಫಾಕ್ ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

See also  ಬೆಳ್ತಂಗಡಿ:ಎರಡು ಮನೆಯಲ್ಲಿ ಮಧ್ಯರಾತ್ರಿ ಕಳ್ಳತನ..! ಸಂಜೆ ದೈವದ ಕೋಲಕ್ಕೆ ತೆರಳಿದ್ದ ಕುಟುಂಬಸ್ಥರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget