ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳಮುಖಿಯರು ಯುವಕನನ್ನು ಕಿಡ್ನಾಪ್ ಮಾಡಿದ್ದೇಕೆ..? ಆತನ ಮರ್ಮಾಂಗವನ್ನೇ ಕತ್ತರಿಸಿ ವಿಕೃತಿ ಮೆರೆಯಲು ಕಾರಣವೇನು? ಏನಿದು ಮಂಗಳಮುಖಿಯರ ಅಮಾನವೀಯ ಕೃತ್ಯ?

197

ನ್ಯೂಸ್‌ ನಾಟೌಟ್‌: ಇತ್ತೀಚೆಗೆ ಮಂಗಳೂರಿನಲ್ಲಿ ಚಾಕು ತೋರಿಸಿ ಸುಲಿಗೆ ಮಾಡುತ್ತಿರುವ ಮಂಗಳಮುಖಿಯರ ಕುರಿತು ಘಟನೆ ಬಹಿರಂಗವಾಗಿತ್ತು. ಕಾರು ನಿಲ್ಲಿಸಿ ಹಣ ಸುಲಿಗೆ ಮಾಡಿರುವ ಬಗ್ಗೆ ಮಂಗಳಮುಖಿಯರ ವಿರುದ್ಧ ನಗರದ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈಗ ಮತ್ತೊಂದು ವಿಕೃತ ಘಟನೆ ನಡೆದಿದ್ದು, ದಾರಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ಯುವಕನ ಕಿಡ್ನಾಪ್ ಮಾಡಿದ ಮಂಗಳಮುಖಿಯರ ಗುಂಪು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರ್ಮಾಂಗ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ.

ಯುವಕ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹೀಂದ್ರ ಬೊಲೆರೋ ವಾಹನದಲ್ಲಿ ಬಂದ 6 ಮಂದಿ ಮಂಗಳಮುಖಿಯರು ಆತನನ್ನು ಅಡ್ಡಗಟ್ಟಿದ್ದಾರೆ. ಬಳಿಕ ಯುವಕನನ್ನು ಹಿಡಿದು ಕಾರಿನಲ್ಲಿ ಕೂಡಿಹಾಕಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಮಲು ಪದಾರ್ಥ ನೀಡಿ ಮರ್ಮಾಂಗವನ್ನೇ ಕತ್ತರಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಕುರಿತು ಅಲಿಘಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಟಾರ್ಗೆಟ್ ಮಾಡಿದ್ದ ಮಂಗಳಮುಖಿಯರು ಬೊಲೆರೋ ವಾಹನದಲ್ಲಿ ಆಗಮಿಸಿದ್ದಾರೆ. ಬಳಿಕ ಯುವಕ ಸಾಗುತ್ತಿದ್ದ ದಾರಿಯಲ್ಲಿ ಅಡ್ಡಲಾಗಿ ನಿಂತಿದ್ದಾರೆ. 6 ಮಂಗಳಮುಖಿಯರು ಯವಕನ ಬಳಿ ಬಂದು ತಮ್ಮ ಜೊತೆಗೆ ಬರುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಯುವಕನ ಮೇಲೆ ಹ* ಲ್ಲೆ ನಡೆಸಿದ್ದಾರೆ. ಬಳಿಕ ಕೈ ಕಾಲು ಹಿಡಿದುಕೊಂಡು ಬಂದು ಕಾರಿನಲ್ಲಿ ಹಾಕಿದ್ದಾರೆ.

ವೇಗಾಗಿ ಕಾರು ನಿರ್ಜನ ಪ್ರದೇಶದತ್ತ ಸಾಗಿಸಿದ್ದು, ಇದೇ ವೇಳೆ ಯುವಕನಿಗೆ ಬಲವಂತವಾಗಿ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಏನಾಗುತ್ತಿದೆ ಅನ್ನೋ ಅರಿವು ಯುವಕನಿಗೆ ಇರಲಿಲ್ಲ. ಇತ್ತ ಮಂಗಳಮುಖಿಯರು ಯುವಕನ ಪ್ರಜ್ಞೆ ತಪ್ಪಿಸಿ ಕಿರುಕುಳ ನೀಡಿದ್ದಾರೆ. ಬಳಿಕ ಮರ್ಮಾಂಗ ಕತ್ತರಿಸಿದ್ದಾರೆ. ಯುವಕನನ್ನು ರಸ್ತೆ ಬದಿಗೆ ಎಸೆದು ಮಂಗಳ ಮುಖಿಯರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜ್ಞೆ ಮರುಕಳಿಸುತ್ತಿದಂತೆ ತೀವ್ರ ನೋವು ರಕ್ತಸ್ರಾವದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ಯುವಕನನ್ನ ಗಮನಿಸಿದ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಯುವಕನ ಪ್ರಾಣ ಉಳಿದಿದೆ. ಆದರೆ ತೀವ್ರ ನೋವು ಹಾಗೂ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬೊಲೆರೋ ವಾಹನ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

See also  ಕರಾವಳಿಗನಿಗೆ ದೊರೆತ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಹುದ್ದೆ, ಮಡಂತ್ಯಾರಿನ ಅರುಣ್ ಪುರ್ಟಾಡೊ ನೇಮಕ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget