ಕರಾವಳಿಕೊಡಗು

ಮಡಿಕೇರಿ:ಆಸ್ತಿ ವಿಚಾರಕ್ಕೆ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ ,ಆರೋಪಿ ಅಣ್ಣನನ್ನು ಬಂಧಿಸಿದ ಪೊಲೀಸರು

ನ್ಯೂಸ್‌ ನಾಟೌಟ್‌: ತಮ್ಮನನ್ನೇ ಗುಂಡಿಟ್ಟು ಅಣ್ಣ ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು ಕೊಡಗಿನ ಪೊನ್ನಂಪೇಟೆ ಬಳಿಯ ಬೇಗೂರಿನಲ್ಲಿ ಶನಿವಾರ ರದಿಯಾಗಿತ್ತು.ಇದೀಗ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಆರೋಪಿ ಅಣ್ಣ ಮಲ್ಲಂಡ ಸುಬ್ರಮಣಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅಣ್ಣ ಸುಬ್ರಮಣಿ ತಮ್ಮ ಪ್ರಕಾಶ್‌ನನ್ನು ತಮ್ಮ ಮನೆಯ ಎದುರಿನ ಕಾಫಿ ತೋಟದಲ್ಲಿ ಗುಂಡು ಹೊಡೆದು ಹತ್ಯೆ ಮಾಡಿದ್ದ. ಈ ಸಂದರ್ಭದಲ್ಲಿ ಮೃತ ಪ್ರಕಾಶ್ ಅವರ ಜೊತೆಯಲ್ಲಿದ್ದ ಮಗ ಧ್ಯಾನ್ ಅವರಿಗೂ ಗುಂಡೇಟು ಬಿದ್ದಿತ್ತು. ಇದೀಗ ಮಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ತಿಳಿದು ಬಂದಿದೆ.

ಪೊನ್ನಂಪೇಟೆ ಸಬ್ ಇನ್‌ಸ್ಪೆಕ್ಟರ್ ನವೀನ್, ಗೋಣಿಕೊಪ್ಪಲು ಸಬ್ ಇನ್‌ಸ್ಪೆಕ್ಟರ್ ರೂಪಾದೇವಿ ಬಿರಾದಾರ್ ಆರೋಪ ಸುಬ್ರಮಣಿ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Related posts

ಪುತ್ತೂರು: ಸರ್ಕಾರಿ ದಾಖಲೆಗಳ ನಕಲಿ ಜಾಲವನ್ನು ಭೇದಿಸಿದ ಪುತ್ತೂರು ತಾಪಂ ಇಓ ನೇತೃತ್ವದ ತಂಡ, ನಕಲಿ ದಾಖಲೆ, ನಕಲಿ ಸೀಲ್ ವಶಕ್ಕೆ

ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ ಎಂದು ನಟ ಸುದೀಪ್ ಅನ್ನು ಪ್ರಶ್ನಿಸಿದ ಪತ್ರಕರ್ತ, ಗರಂ ಆಗಿ ಉತ್ತರಿಸಿದ ಕಿಚ್ಚ..!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ ಪುಂಗನೂರು ತಳಿಯ 4 ಗೋವುಗಳು..!,7 ಲಕ್ಷ ರೂ. ಮೌಲ್ಯದ ಗೋವುಗಳನ್ನು ದಾನವಾಗಿ ನೀಡಿದ ಎಎಂಆರ್‌ ಗ್ರೂಪ್‌ನ ಆಡಳಿತ ನಿರ್ದೇಶಕರಿಗೆ ಭಕ್ತರಿಂದ ಶ್ಲಾಘನೆ