ಕರಾವಳಿಪುತ್ತೂರು

ಪುತ್ತೂರು: ಅಡಿಕೆ, ಕರಿಮೆಣಸನ್ನು ಬಿಜೆಪಿ ಸರಕಾರವೇ ಕೈ ಬಿಟ್ಟಿದ್ದು, ಕಮಲ ಪಾಳಯದ ವಿರುದ್ಧ ಗುಡುಗಿದ ಮಹಮ್ಮದ್ ಅಲಿ

239

ನ್ಯೂಸ್ ನಾಟೌಟ್: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಿಂದ ಅಡಿಕೆ ಹಾಗೂ ಕರಿಮೆಣಸನ್ನು ಬಿಜೆಪಿ ಸರಕಾರವೇ ಕೈ ಬಿಟ್ಟಿದ್ದು ಎಂದು ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಪ್ರತಿನಿಧಿಸುವ ಬಿಜೆಪಿ ಸರಕಾರವೇ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಿಂದ ಅಡಿಕೆ ಮತ್ತು ಕರಿಮೆಣಸನ್ನು ಕೈ ಬಿಟ್ಟಿದ್ದಾರೆ. ಕೇಂದ್ರ ಸರಕಾರ ವಾಣಿಜ್ಯ ಬೆಳೆಗಳಿಗಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ಕೈಬಿಡಲಾಗಿದೆ.

ಈ ಯೋಜನೆಯನ್ನು ಕೈ ಬಿಡಲು ಬಿಜೆಪಿ ಸರಕಾರವೇ ನೇರ ಕಾರಣವಾಗಿದೆ. ದಿನಾಂಕ 06/02/2024 ರಂದು ನಡೆದ ರಾಜ್ಯ ಮಟ್ಟದ ಬೆಳೆ ವಿಮಾ ಸಮನ್ವಯ ಸಮಿತಿ ಸಭೆಯಲ್ಲಿರಾಜ್ಯದಲ್ಲಿ ಕೇಂದ್ರ ಸರಕಾರದ ಪರಿಷೃತ ಮಾರ್ಗಸೂಚಿಯನ್ವಯ ಪ್ರಧಾನಮಂತ್ರಿ ಫಸಲ್ ಯೋಜನೆಯನ್ನು ಮಾತ್ರ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಆದರೆ ಈ ಸಭೆಯಲ್ಲಿ ಹವಾಮಾನ ಆಧಾರಿತ ವಿಮಾ ಯೋಜನೆಗೆ ಅನುಮೋದನೆ ನೀಡದೆ ಕೈ ಬಿಟ್ಟಿರುತ್ತಾರೆ. 06/02/2023 ರಂದು ನಡೆದ ಈ ಸಭೆಯ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತವಿತ್ತು. ಮತ್ತು ಆ ಸಮಯದಲ್ಲಿ ಸಂಜೀವ ಮಠಂದೂರು ಶಾಸಕರಾಗಿಯೂ ಇದ್ದರು ಎಂದು ಮಾಹಿತಿ ನೀಡಿದರು.

See also  ಸುಬ್ರಹ್ಮಣ್ಯ ಪರಿಸರಕ್ಕೆ ಮಳೆಯ ಸ್ಪರ್ಷ,ಎಪ್ರಿಲ್ ತಿಂಗಳಲ್ಲಾದ ಮೂರನೇ ಬಾರಿಯ ಮಳೆಗೆ ಫುಲ್ ಖುಷ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget