ಕೊಡಗುಕ್ರೈಂವೈರಲ್ ನ್ಯೂಸ್

ಮಡಿಕೇರಿ: ತಾಯಿಯನ್ನೇ ಕೊಂದ ಪಾಪಿ ಮಗ..! ರಕ್ತಸ್ರಾವ ಆದರೂ ಆಸ್ಪತ್ರೆಗೆ ದಾಖಲಿಸದ್ಯಾಕೆ..? ಕೊಡಗಿನಲ್ಲಿ ನಡೆಯಿತು ಅಮಾನವೀಯ ಕೃತ್ಯ!

210

ನ್ಯೂಸ್‌ ನಾಟೌಟ್‌: ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸವಾಗಿದ್ದು, ನೀನು ಕುಡಿಯಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ಮಗ ಹೊಡೆದು ಕೊಂದಿರುವ ದುರ್ಘಟನೆ ಕೊಡಗು ಜಿಲ್ಲೆಯ ಕಟ್ಟೆಪುರ ಹಾಡಿ ಬುಧವಾರ ರಾತ್ರಿ ಸಂಭವಿಸಿದೆ.

ಮೃತ ಮಹಿಳೆಯನ್ನು ಲಲಿತಾ (45) ಎಂದು ಗುರುತಿಸಲಾಗಿದ್ದು, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಹಾಡಿಯಲ್ಲಿ ಘಟನೆ ನಡೆದಿದೆ. ಜೇನುಕುರುಬ ಸಮುದಾಯದ ರಾಜಶೇಖರ ಎಂಬಾತನೆ ತಾಯಿಯನ್ನು ಕೊಂದ ಪಾಪಿ ಮಗ. ನಿನ್ನೆ ರಾತ್ರಿ ವೇಳೆ ಕುಡಿದು ಬಂದು ತಾಯಿ ಜೊತೆಯಲ್ಲಿ ಊಟದ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ. ಅಲ್ಲದೇ ಕುಡಿಯಲು ಇನ್ನೂ ಹೆಚ್ಚಿನ ಹಣ ಬೇಕು ಎಂದು ಕೇಳಿದ್ದ.

ಆಗ, ನೀನು ಮದ್ಯ ಸೇವನೆ ಮಾಡಬೇಡ ಎಂದು ಬೈದು ಬುದ್ಧಿ ಹೇಳಿದ್ದಕ್ಕೆ ತಾಯಿಯ ಮೇಲೆ ಕೋಪಗೊಂಡ ಪಾಪಿ ಮಗ ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ತಾಯಿಯ ತಲೆಗೆ ಹೊಡೆದಿದ್ದಾನೆ. ಇದಾದ ನಂತರ, ತೀವ್ರ ಗಾಯಗೊಂಡು ರಕ್ತಸ್ರಾವದಲ್ಲಿ ತಾಯಿ ಬಿದ್ದರೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸದ ಕಾರಣ ತಾಯಿ ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆ ಕುರಿತಂತೆ ಸ್ಥಳೀಯ ಹಾಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಶನಿವಾರಸಂತೆ ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಕೊಲೆ ಮಾಡಿದ ಮಗನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಘಟನೆ ಕುರಿತಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

See also  Darshan Thoogudeepa Case: ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಪಟ್ಟಣಗೆರೆ ಶೆಡ್ ಗೆ ಕರೆದೊಯ್ದ ಪೊಲೀಸರು..! ಸ್ಥಳ ಮಹಜರು ವೇಳೆ ದರ್ಶನ್ ಬಳಿ ಬಂದು ಕಣ್ಣೀರಿಟ್ಟ ಪವಿತ್ರ ಗೌಡ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget