ಕರಾವಳಿಕೊಡಗು

ಮಡಿಕೇರಿ: ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಚಿಮ್ಮಿ ಬಿದ್ದ ಯುವಕರು,ಸ್ಥಳದಲ್ಲೇ ಯುವಕರಿಬ್ಬರು ದುರಂತ ಅಂತ್ಯ:ರಾತ್ರಿ ಘಟನೆ ನಡೆದಿದ್ದರೂ ಬೆಳಗ್ಗೆಯವರೆಗೂ ಗೊತ್ತೇ ಆಗಲಿಲ್ಲ..!

156

ನ್ಯೂಸ್ ನಾಟೌಟ್ : ಬೈಕ್ ಅಪಘಾತದಲ್ಲಿ (‌Road Accident) ಸಂಭವಿಸಿ ಇಬ್ಬರು ಸ್ಥಳದಲ್ಲೇ ದುರಂತ ಅಂತ್ಯ ಕಂಡಿರುವ ಘಟನೆ ವರದಿಯಾಗಿದೆ.ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಬಿರ್ಚಿ ವುಡ್ ರೆಸಾರ್ಟ್ ಸಮೀಪದಲ್ಲಿ ರಾತ್ರಿ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದ್ದು, ನಿರ್ಜನ ಪ್ರದೇಶವಾದ್ದರಿಂದ ಬೆಳಗ್ಗಿನವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.

ಉದಯ(25) ಹಾಗೂ ಚಂದನ್(26) ದುರಂತ ಅಂತ್ಯಕ್ಕೀಡಾದವರು.ಬೈಕ್‌ ಲೈಟ್ ಕಂಬಕ್ಕೆ ಅಪ್ಪಳಿಸಿದ್ದರಿಂದ ಬೈಕ್‌ನಿಂದ ಚಿಮ್ಮಿ ಬಿದ್ದ ಸವಾರರು ಸ್ಥಳದಲ್ಲೆ ಉಸಿರು ಚೆಲ್ಲಿದ್ದಾರೆ. ಧಾರಾಕಾರವಾಗಿ ಮಳೆ ಬರುತ್ತಿದ್ದುದರಿಂದ ದಾರಿ ಕಾಣದೆ ಅಥವಾ ಸ್ಕಿಡ್‌ ಆಗಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಇಬ್ಬರು ಯುವಕರು ಕೂಡ ಸುಂಟಿಕೊಪ್ಪದ ಮದುರಮ ಬಡಾವಣೆ ನಿವಾಸಿಗಳು ಎಂದು ವರದಿಯಾಗಿದೆ. ನಿನ್ನೆ ರಾತ್ರಿಯೇ ಇವರು ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬರುವಾಗ ಅಪಘಾತ ನಡೆದಿದ್ದು, ಮುಂಜಾನೆ ಬೆಳಕಿಗೆ ಬಂದಿದೆ.ಅಪಘಾತವಾಗುವ ವೇಳೆ ಯಾರದ್ದಾದರೂ ಗಮನಕ್ಕೆ ಬರುತ್ತಿದ್ದರೇ ಯುವಕರು ಬದುಕುಳಿಯುತ್ತಿದ್ದ ಸಾಧ್ಯತೆ ಹೆಚ್ಚಿತ್ತೇನೋ..ಆದರೆ ದುರದೃಷ್ಟವಶಾತ್ ಘಟನೆ ಬೆಳಕಿಗೆ ಬಂದಾಗಲೇ ತಡವಾಗಿತ್ತು.ಈ ವೇಳೆಗಾಗಲೇ ಇಬ್ಬರು ಯುವಕರು ಬಾರದ ಲೋಕಕ್ಕೆ ತೆರಳಿದ್ದರು. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

https://www.youtube.com/watch?v=09utl2U70mY
See also  ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ..? ಭಕ್ತೆ ಮಾಡುತ್ತಿರುವ ಆರೋಪವೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget