ಕರಾವಳಿಕೊಡಗು

ಮಡಿಕೇರಿ, ಭಾಗಮಂಡಲ, ತಲಕಾವೇರಿಯಲ್ಲಿ ಅಬ್ಬರಿಸಿದ ಮಳೆ, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ

ನ್ಯೂಸ್ ನಾಟೌಟ್: ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದರೆ ಅತ್ತ ಕೊಡಗಿನಲ್ಲೂ ವರುಣ ರಾಯ ಅಬ್ಬರಿಸುತ್ತಿದ್ದಾನೆ. ಮಡಿಕೇರಿ, ಭಾಗಮಂಡಲ, ತಲಕಾವೇರಿಯಲ್ಲಿ ಭಾರಿ ಮಳೆಯಾಗುತ್ತಿದೆ.

ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬುಧವಾರ ಮಳೆ ಮುಂದುವರಿದಿದೆ. ಇದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲು ಏರಿಕೆಯಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಒಳ ಹರಿವು ಒಂದೂವರೆ ಸಾವಿರ ಕ್ಯುಸೆಕ್ ದಾಟಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಭಾರಿ ಏರಿಕೆಯಾಗುತ್ತಿದೆ. ಶ್ರೀಮಂಗಲದ ಸಮೀಪ ರಸ್ತೆಗೆ ಮರವೊಂದು ಉರುಳಿ ಬಿದ್ದಿದೆ. ಖಾಸಗಿ ಬಸ್ ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 19 ಸೆಂ.ಮೀನಷ್ಟು ಮಳೆಯಾಗಿದೆ ಎಂದು ವರದಿಯಾಗಿದೆ.

Related posts

ಪುತ್ತೂರು ವ್ಯಕ್ತಿ ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ಮೃತ್ಯು

ಇನ್‌ಸ್ಟಾಗ್ರಾಂನಲ್ಲಿ ಬಟ್ಟೆ ಆರ್ಡರ್ ಮಾಡಿ 80,560 ಕಳೆದುಕೊಂಡ ವ್ಯಕ್ತಿ!

ಮಡಿಕೇರಿ :ಮಳೆಗಾಲದ ಚುಮು ಚುಮು ಚಳಿಗೆ ಬಟ್ಟೆ ಒಣಗಿಸುವುದೇ ಸವಾಲು..ಕೊಡಗಿನ ಜನತೆ ಬಟ್ಟೆ ಒಣಗಿಸಲು ಬಳಂಜಿ,ಅಗ್ಗಿಷ್ಟಿಕೆ,ಏಡಿಗಳಿಗೆ ಮೊರೆ ಹೋಗೊದ್ಯಾಕೆ?