ಕ್ರೈಂ

ಮಡಿಕೇರಿಯಲ್ಲೊಬ್ಬ ಆನೆ ದಂತಚೋರ ಅರೆಸ್ಟ್

ಮಡಿಕೇರಿ: ಎರಡು ಆನೆ ದಂತಗಳನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೊಡಗು ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಬಂಧಿತನನ್ನು ಕೆ.ಆರ್‌.ನಗರದ ನಿವಾಸಿ ಅಭಿಜಿತ್ (28 ) ಎಂದು ತಿಳಿಸಲಾಗಿದೆ. ಮಡಿಕೇರಿ ತಾಲೂಕಿನ ಸಂಪಿಗೆ ಕಟ್ಟೆಯಿಂದ ಸೋಮವಾರ ಪೇಟೆಗೆ ಹೋಗುವ ಜಂಕ್ಷನ್‌ ಬಳಿ ಈಗ ಅಕ್ರಮವಾಗಿ ಆನೆದಂತ ಸಾಗಿಸಿಕೊಂಡು ತನ್ನ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎಸ್ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್ ಐ ಸಿಯು ಸವಿ, ಹೆಡ್‌ ಕಾನ್‌ಸ್ಟೇಬಲ್ ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಚಂಗಪ್ಪ ಹಾಗೂ ಮೋಹನ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related posts

ಮಂಗಳೂರು: ಅಪ್ರಾಪ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ..! ರಿಕ್ಷಾ ಚಾಲಕ ರಝೀನ್ ಬಾಡಿಗೆ ಮನೆಗೆ ಕರೆದೊಯ್ದಿದ್ದ ಎಂದ ಯುವತಿ!

ಮಂಗಳೂರು: ಐವನ್ ಡಿಸೋಜಾ ಮನೆ ಮೇಲೆ ರಾತ್ರಿ ಕಲ್ಲು ತೂರಾಟ..! ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಂಎಲ್​ಸಿ..!

ಬೆಳ್ಳಾರೆಯಲ್ಲಿ ಅಕ್ರಮ ಗೋಸಾಗಾಟ ಪತ್ತೆ,ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ