ಕರಾವಳಿಕೊಡಗುಸುಳ್ಯ

ಮಡಿಕೇರಿ : ಕಾಫಿ ತೋಟಕ್ಕೆಂದು ತೆರಳಿದ್ದ ವ್ಯಕ್ತಿಗೆ ಕಾಡಾನೆ ದಾಳಿ, ಕಾಫಿ ಬೆಳೆಗಾರ ಗಂಭೀರ-ಚಿಕಿತ್ಸೆ

373

ನ್ಯೂಸ್ ನಾಟೌಟ್ : ಕಾಫಿ ಬೆಳೆಗಾರನೊಬ್ಬನಿಗೆ ಹಾಡಹಗಲೇ ಕಾಡಾನೆ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿರುವ ಘಟನೆ ಮಡಿಕೇರಿಯ ಇಂಜಿಲಗೆರೆಯ ಗ್ರಾಮದ ಕೌರಿ ಎಂಬಲ್ಲಿ ನಡೆದಿದೆ.ಅಮ್ಮತ್ತಿ ಸಮೀಪದ ಕೌರಿ ನಿವಾಸಿ ಕಾಫಿ ಬೆಳೆಗಾರ ಉದ್ದಪಂಡ ಚಂಗಪ್ಪ (48) ಗಾಯಗೊಂಡ ವ್ಯಕ್ತಿ.

ಇವರು ಎಂದಿನಂತೆ ಮನೆಯಿಂದ ಕಾಫಿ ತೋಟಕ್ಕೆಂದು ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.ಕಾಪಿ ತೋಟದ ಎಲ್ಲೋ ಇದ್ದ ಕಾಡಾನೆ ಇವರನ್ನು ನೋಡಿ ಹಿಂಭಾಗದಿಂದ ಓಡಿ ಬಂದು ಚಂಗಪ್ಪ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.ಇದರಿಂದ ಚಂಗಪ್ಪ ಅವರ ಸೊಂಟಕ್ಕೆ, ಕೈ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ತಿಳಿದು ಬಂದಿದೆ.ಅಮ್ಮತ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

https://www.youtube.com/watch?v=RoNnlp7cM10
See also  ಸುಳ್ಯ: ಪರಿವಾರಕಾನದ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ..! ಪ್ರಯಾಣಿಕರಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget