ಕರಾವಳಿಕೊಡಗುಕ್ರೈಂ

ಮಡಿಕೇರಿ: ಮಳಿಗೆಯೊಂದರಲ್ಲಿ ಬೆಂಕಿ ದುರಂತ,ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿ

227

ನ್ಯೂಸ್ ನಾಟೌಟ್ : ಅಂಗಡಿ ಮಳಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.ನಗರದ ಕೆಎಸ್‍ಆರ್ ಟಿಸಿ ಬಸ್ಸು ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದೆ.

ಟಿ.ವಿ.ಎಸ್. ಶೋ ರೂಂ ಮುಂಭಾಗದ ಹಾಬೀಬ್ ಉಲ್ಲಾಖಾನ್ ಎಂಬವರ ಕಟ್ಟಡದಲ್ಲಿ ಮಳಿಗೆ ಹೊಂದಿರುವ ನಂದಿ ಪೈಂಟ್ಸ್ ಮತ್ತು ಹಾರ್ಡ್‍ವೇರ್ ಮಳಿಗೆಗೂ ಆಕಸ್ಮಿಕ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಜತೆಗೆ ದಿನೇಶ್ ಎಂಬವರಿಗೆ ಸೇರಿದ ಪೈಂಟ್ಸ್ ಮತ್ತು ಹಾರ್ಡವೇರ್ ಅಂಗಡಿಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ.ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಇತ್ತ ಮಳಿಗೆಯಲ್ಲಿದ್ದ ಪೈಂಟ್ಸ್, ನಗದು ಸೇರಿದಂತೆ ಮೂರು ಕಂಪ್ಯೂಟರ್, ಪ್ರಿಂಟಿಂಗ್ ಮೆಷಿನ್, ಕಲರ್ ಮಿಕ್ಸಿಂಗ್ ಮೆಷಿನ್ ಮತ್ತು ಬೆಲೆಬಾಳುವ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.ಅಂಗಡಿ ಮಾಲೀಕ ದಿನೇಶ್ ಅವರು ವಿರಾಜಪೇಟೆ ನಗರ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.

See also  ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಮಾಡಿದ್ದವ ರುವಾಂಡಾ ದೇಶದಲ್ಲಿ ಅರೆಸ್ಟ್..! ಭಾರತಕ್ಕೆ ಹಸ್ತಾಂತರ
  Ad Widget   Ad Widget   Ad Widget   Ad Widget   Ad Widget   Ad Widget   Ad Widget