ಕರಾವಳಿಕೊಡಗುಸುಳ್ಯ

ಮದೆನಾಡು: ಪ್ರಾಕೃತಿಕ ವಿಕೋಪ ಎದುರಿಸಲು ಪೊಲೀಸರಿಂದ ತಾಲೀಮು..! ಬೆಟ್ಟ-ಗುಡ್ಡ ಹತ್ತಿ ಇಳಿದು ಭರ್ಜರಿ ಸಾಹಸ

196

ನ್ಯೂಸ್ ನಾಟೌಟ್: ಮಳೆಗಾಲ ಶುರುವಾಯಿತೆಂದರೆ ಕೊಡಗಿನಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ವರ್ಷ ಪ್ರವಾಹದಿಂದ ಎಷ್ಟೆಲ್ಲ ನಷ್ಟ ಸಂಭವಿಸಿ ಜೀವ ಹಾನಿಯಾಯಿತು ಅನ್ನುವ ದೃಶ್ಯಗಳು ಇನ್ನೂ ಕಣ್ಣ ಮುಂದಿದೆ. ಇಂತಹ ಸಂದರ್ಭದಲ್ಲಿ ಅನಾಹುತವನ್ನು ಎದುರಿಸಲು ಕೊಡಗು ಪೊಲೀಸ್ ಸರ್ವ ರೀತಿಯ ತಯಾರಿಯನ್ನು ಮಾಡಿಕೊಂಡಿದೆ. ಅಪಾಯ ಎದುರಾದರೆ ಏನೆಲ್ಲ ಮಾಡಬೇಕು ಅನ್ನುವುದನ್ನು ತಾಲೀಮು ನಡೆಸಿ ತೋರಿಸಿಕೊಟ್ಟಿದೆ.

30 ಮಂದಿ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ಕೊಡಗು ಜಿಲ್ಲಾ ಪೊಲೀಸ್ ವಿಪತ್ತು ನಿರ್ವಹಣಾ ತಂಡದಿಂದ ಮದೆನಾಡು ಗ್ರಾಮ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ನಡೆಸುವ ಬಗ್ಗೆ ಅಭ್ಯಾಸ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನೇತೃತ್ವದಲ್ಲಿ ನಡೆದ ಅಭ್ಯಾಸ ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪವಿಭಾಗ ಸಹಾಯಕ ಎಸ್.ಪಿ, ಆರ್.ಪಿ.ಐ. ಡಿಎಆರ್ ಮಡಿಕೇರಿ ಹಾಗೂ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

See also  ಹಾಕಿ: ಪ್ರಚಂಡ ಪ್ರದರ್ಶನ, ಕೊಡಗಿನ ಹುಡುಗಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget