ಕರಾವಳಿ

ಲವ್ ಜಿಹಾದ್ ಗೆ ಬಲಿಯಾಗಬೇಡಿ …. ಹಿಂದೂ ಹುಡುಗಿಯರೇ ಹುಷಾರ್‌..!

351

ನ್ಯೂಸ್ ನಾಟೌಟ್: ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಹಿಂದೂ ಹುಡುಗಿಯರು ಕುರುಡು ಪ್ರೇಮಕ್ಕೆ ಬಲಿಯಾಗಿ ತಮ್ಮ ಜೀವ-ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯಿರುವ ಅರಣ್ಯ ಇಲಾಖೆಯ ಕಚೇರಿಯ ಎದುರು ಲವ್ ಜಿಹಾದ್ ವಿರುದ್ಧ ಕಟೌಟ್ ಅನ್ನು ಅಳವಡಿಸಿದ್ದಾರೆ.

ಖ್ಯಾತ ವೈದ್ಯರಾಗಿರುವ ಹಾಗೂ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ.ಎಂ.ಕೆ ಪ್ರಸಾದ್ ಭಂಡಾರಿ ಅವರ ಹೆಸರಿನಲ್ಲಿ ಈ ಕಟೌಟ್ ಅಳವಡಿಸಿದ್ದಾರೆ. ಹಿಂದೂ ಹುಡುಗಿ ಶ್ರದ್ಧಾಳ ಹತ್ಯೆಯಾಗಿ ಆಕೆಯ ದೇಹವನ್ನು 35 ತುಂಡು ಮಾಡಿದರು . ಇದಕ್ಕೆ ಕಾರಣ ಲವ್ ಜಿಹಾದ್. ಹಾಗಾಗೀ ಇದಕ್ಕೆ ನೀವು ಬಲಿಯಾಗಬೇಡಿ ಎಂದು ಎಚ್ಚರಿಸುವ ಕಟೌಟ್ ಅನ್ನು ಹಾಕಲಾಗಿದೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

See also  ಕಡಬ ಮೂಲದ ವಿಚಾರಣಾಧೀನ ಕೈದಿಯಿಂದ ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ, ಜೈಲಿನಲ್ಲಿಇದ್ದುಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ಆಸಾಮಿ, ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget