ಕ್ರೈಂವೈರಲ್ ನ್ಯೂಸ್

ನಿನ್ನೊಂದಿಗೆ ಟೈಂಪಾಸ್ ಮಾಡಿದ್ದು ಎಂದನಂತೆ ಹುಡುಗ! ಯುವಕನ ಮನೆ ಮುಂದೆ ಧರಣಿ ಕೂತ ಯುವತಿ! ಮುಂದೇನಾಯ್ತು?

220

ನ್ಯೂಸ್ ನಾಟೌಟ್:  ಪ್ರೀತಿಸಿದ ಯುವಕ ಕೈ ಕೊಟ್ಟಿದ್ದಾನೆಂದು ಆರೋಪಿಸಿ, ಹಾವೇರಿಯ ಯುವತಿಯೊಬ್ಬಳು ಯುವಕನ ಮನೆಯ ಮುಂದೆ ಧರಣಿ ನಡೆಸಿರುವ ಘಟನೆ ಕಾರವಾರದ ಮುಂಡಗೋಡ ತಾಲ್ಲೂಕಿನ ಮೈನಳ್ಳಿಯಲ್ಲಿ ಮಂಗಳವಾರ ವರದಿಯಾಗಿದೆ.

ಪ್ರಕಾಶ್ ಕಲಾಲ್ ಬದಶಂಕರ್ ಎಂಬ ಯುವಕ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೇ, ಯುವತಿ ಮೌನವಾಗಿಯೇ ಪ್ರತಿಭಟನೆ ನಡೆಸಿದ್ದಾಳೆ ಎನ್ನಲಾಗಿದೆ. ಹಾವೇರಿಯ ರಾಣೆಬೆನ್ನೂರಿನಲ್ಲಿ ಇಬ್ಬರೂ ಕೋರ್ಸ್ ಒಂದಕ್ಕೆ ಸೇರಿದ್ದ ಸಂದರ್ಭದಲ್ಲಿ ಇಬ್ಬರ ಮಧ್ಯೆ ಸ್ನೇಹ ಬೆಸೆದು, ಅದು ಪ್ರೀತಿಯಾಗಿ ಬದಲಾಗಿತ್ತು. ನಂತರ ಇಬ್ಬರೂ ಬೆಂಗಳೂರಿಗೆ ಹೋಗಿ ಸುತ್ತಾಡಿದ್ದರು ಎನ್ನಲಾಗಿದೆ.

ಅವರ ನಡುವೆ ದೈಹಿಕ ಸಂಬಂಧವೇರ್ಪಟ್ಟಿದೆ. ನಂತರ ಯುವತಿ ಮದುವೆ ಪ್ರಸ್ತಾಪ ಮಾಡಿದಾಗ, ಪ್ರಕಾಶ್, ನಿನ್ನೊಂದಿಗೆ ಟೈಂಪಾಸ್ ಮಾಡಿದ್ದು ಅನ್ನುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಯುವತಿಯ ಆರೋಪ ಎಂದು ವರದಿ ತಿಳಿಸಿದೆ.

See also  ಲಿಫ್ಟ್‌ನೊಳಗೆ ಹೊಡೆದಾಟ..! ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮಹಿಳೆಯ ನಡುವೆ ಅಂತದ್ದೇನಾಯ್ತು? ಇಲ್ಲಿದೆ ವಿಡಿಯೋ ವೈರಲ್‌
  Ad Widget   Ad Widget   Ad Widget   Ad Widget   Ad Widget   Ad Widget   Ad Widget