ಕರಾವಳಿಬೆಂಗಳೂರು

ಪ್ರೇಮ ವಿವಾಹವಾಗಿದ್ದ ಮನೆ ಮಗಳನ್ನು ಹುಡುಗನ ಮನೆಗೆ ನುಗ್ಗಿ ಅಪಹರಿಸಿದ ಗ್ಯಾಂಗ್! ಏನಿದು ಕೇರಳ ಕರ್ನಾಟಕ ನಡುವಿನ ಪ್ರೇಮ ದಂಗಲ್!

242

ನ್ಯೂಸ್ ನಾಟೌಟ್: ಕರ್ನಾಟಕದ ಯುವತಿ ಹಾಗೂ ಕೇರಳದ ಆಳಪ್ಪುಳದ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಯುವತಿಯ ಸಂಬಂಧಿಕರು ಕೆಲ ಸಮಯದ ಬಳಿಕ ಗಂಡನ ಮನೆಯವರ ಮೇಲೆ ದಾಳಿ ನಡೆಸಿ ಯುವತಿಯನ್ನ ಕಿಡ್ನಾಪ್​ ಮಾಡಿಕೊಂಡು ಬಂದಿದ್ದಾರೆ ಎಂದು ದೂರು ದಾಖಲಿಸಲಾಗಿದೆ.

ಹರಿಪಾಡ್ ಕಾರ್ತಿಕಪಲ್ಲಿಯ 12ನೇ ವಾರ್ಡ್ ನ ಅಖಿಲ ಭವನದಲ್ಲಿ ವಾಸಿಸುವ ಅನಿಲ್ ಕುಮಾರ್ ಅವರ ಪುತ್ರ ಅಖಿಲ್ (22) ಅವರೊಂದಿಗೆ ಪ್ರೀತಿಸಿ ವಿವಾಹವಾಗಿದ್ದ ನ್ಯೂ ಹಾರಿಜನ್ ಕಾಲೇಜಿನಲ್ಲಿ ಓದುತ್ತಿದ್ದ ಬೆಂಗಳೂರು ಕಸ್ತೂರಿ ನಗರ ಪಿ ಕೃಷ್ಣ ಅವರ ಪುತ್ರಿ ವಿದ್ಯಾಶ್ರೀ (18) ಅವರನ್ನು ಆಕೆಯ ಸಂಬಂಧಿಕರು ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಖಿಲ್ ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾಶ್ರೀಯನ್ನು ಭೇಟಿಯಾಗಿದ್ದಾನೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಹುಡುಗಿ ಮನೆ ಬಿಟ್ಟು ಅಖಿಲ್ ಜೊತೆ ಓಡಿ ಬಂದಿದ್ದಾಳೆ ಎನ್ನಲಾಗಿದೆ. ಹುಡುಗಿ ಮಾರ್ಚ್ 29 ರಂದು ಅಖಿಲ್ ಜೊತೆ ಕೇರಳದ ಆಳಪ್ಪುಳ್​ಗೆ ಬಂದಿದ್ದು, ಮಾರ್ಚ್​ 30ರಂದು ಸ್ಥಳೀಯ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ.

ಶನಿವಾರ ಮುಂಜಾನೆ 5:30ರ ಸುಮಾರಿಗೆ ಮಾರಕಾಯುಧಗಳೊಂದಿಗೆ ಮೂರು ವಾಹನಗಳಲ್ಲಿ ಬಂದಿದ್ದ ಯುವತಿಯ ಸಂಬಂಧಿಕರ ಗುಂಪು ಯುವಕನ ಮನೆಯವರಿಗೆ ಹಲ್ಲೆ ಮಾಡಿ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಮನೆಯ ಬಾಗಿಲನ್ನು ಒದ್ದು ಒಳಗೆ ಪ್ರವೇಶಿಸಿದ ಗುಂಪು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ತಡೆಯಲು ಮುಂದಾದವರ ಮೇಲೆ ಹಲ್ಲೆ ನಡೆಸಿ ಮಾರಕಾಯುಧ ತೋರಿಸಿ ಕೊಲೆ ಬೆದರಿಕೆ ಹಾಕಿ ಆಕೆಯನ್ನು ವಾಹನದಲ್ಲಿ ಕರೆದೊಯ್ದಿದ್ದಾರೆ ಎಂದು ಅಖಿಲ್ ದೂರಿನಲ್ಲಿ ತಿಳಿಸಿದ್ದಾರೆ.

ಕಿಡ್ನಾಪ್​ ದೂರು ದಾಖಲಾಗಿರುವ ಹಿನ್ನಲೆ ತಿರ್ಕುನ್ನಪುಳ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ. ತಿರ್ಕುನ್ನಪುಳ ಎಸ್‌ಐ ರತೀಶ್ ಬಾಬು ಮತ್ತು ಸಿಪಿಒಗಳಾದ ಶ್ಯಾಮ್, ವಿಷ್ಣು, ವೈಶಾಖ್ ಮತ್ತು ಅತಿರಾ ಅವರನ್ನೊಳಗೊಂಡ ತಂಡ ಬೆಂಗಳೂರಿಗೆ ತೆರಳಿದ್ದು, ಕಿಡ್ನಾಪ್ ತಂಡವು ತಮಿಳುನಾಡು ಮೂಲಕ ಬೆಂಗಳೂರಿಗೆ ತೆರಳಿದೆ ಎಂದು ತ್ರಿಕುನ್ನಪುಳ ಪೊಲೀಸರು ತಿಳಿಸಿದ್ದಾರೆ.

See also  ಪೆರಾಜೆ:ಆನೆ ಬಂತೊಂದಾನೆ..!ಶಾಲಾ ಮಕ್ಕಳ ಓಮ್ನಿ ಪುಡಿಗೈದ ಕಾಡಾನೆ..!ಒಂಟಿ ಸಲಗನ ದರ್ಶನದಿಂದ ಕಂಗಾಲಾದ ಸ್ಥಳೀಯರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget