ಕ್ರೈಂವೈರಲ್ ನ್ಯೂಸ್

ಆಕೆ ಪ್ರೀತಿ ವಿರೋಧಿಸಿದ್ದಕ್ಕೆ ಪೋಷಕರಿಗೆ ಕಾಟ ಕೊಟ್ಟ ಪಾಗಲ್ ಪ್ರೇಮಿ..! ಯುವತಿಯ ತಂದೆಯ ಕಾಲು ಮುರಿದು, ಕಣ್ಣಿಗೆ ಕಲ್ಲಿನಿಂದ ಜಜ್ಜಿದ ಕ್ರೂರಿ..!

178

ನ್ಯೂಸ್ ನಾಟೌಟ್: ಪ್ರೀತಿ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ರೀತಿಯಲ್ಲೇ ರಾಯಚೂರಿನಲ್ಲೂ ವಿಚಿತ್ರ ಘಟನೆ ವರದಿಯಾಗಿದೆ. ಅಲ್ಲಿ ಪ್ರೀತಿ ನಿರಾಕರಣೆಗೆ ನೇಹಾಳ ಕೊಲೆಯಾದರೆ, ಇಲ್ಲಿ ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಹೆತ್ತವರ ಮೇಲೆ ಪಾಗಲ್‌ ಪ್ರೇಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ರಾಯಚೂರಿನ ಸಿಂಧನೂರು ತಾಲೂಕಿನ ಆರ್‌ಎಚ್ ಕ್ಯಾಂಪ್ 3 ರಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಪಾಗಲ್‌ ಪ್ರೇಮಿಯೊಬ್ಬ ಯುವತಿಯೊಬ್ಬಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ, ಈತನ ಕಾಟಕ್ಕೆ ಯುವತಿ ಪೋಷಕರು ಆಕೆಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಇದರಿಂದ ಸಿಟ್ಟಾದ ಯುವಕ ಯುವತಿಯ ಪೋಷಕರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕಳೆದ ಏಪ್ರಿಲ್ 14 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿ ತಂದೆ ಹೀರಾ ಮೋಹನ್, ತಾಯಿ ಶೃತಿ ಮಂಡಲ್, ಸಹೋದರ ಹೀಮಂತು ಸಂಬಂಧಿ ಶುಬ್ರತೋ ಮೇಲೆ ಪ್ರಣವ್‌ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಪಾಗಲ್‌ ಪ್ರೇಮಿ ತಂಡ ಕಟ್ಟಿಕೊಂಡು ಬಂದು ಯುವತಿ ತಂದೆ ಕಾಲು ಮುರಿದಿದ್ದಾನೆ.

ಕಣ್ಣಿಗೆ ಕಲ್ಲಿನಿಂದ ಜಜ್ಜಿ ಕಣ್ಣು ಕಾಣದಂತೆ ಹಲ್ಲೆ ನಡೆಸಿದ್ದಾನೆ. ಮಾತ್ರವಲ್ಲದೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಯುವತಿ ತಾಯಿಯ ಸೀರೆ ಎಳೆದಾಡಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಪಾಗಲ್‌ ಪ್ರೇಮಿ ಪ್ರಣವ್‌ ಎಂಬಾತ ಹೀರಾಮೋಹನ್ ಮಗಳಿಗೆ ಪ್ರೀತಿಸುವಂತೆ ಟಾರ್ಚರ್ ಕೊಡುತ್ತಿದ್ದ. ಈ ವಿಷಯ ತಿಳಿದ ಪೋಷಕರು, ಮಗಳನ್ನು ಊರು ಬಿಡಿಸಿ ಸಂಬಂಧಿಕರ ಮನೆಯಲ್ಲಿರಿಸಿದ್ದರು. ಯುವತಿ ಸಂಪರ್ಕಕ್ಕೆ ಸಿಗದೇ ಇದ್ದಾಗ ಸಿಟ್ಟಾದ ಪ್ರಣವ್‌, ಆಕೆಯನ್ನು ಯಾಕೆ ಬೇರೆಡೆ ಕಳುಹಿಸಿದ್ದೀರಾ ಎಂದು ಗಲಾಟೆ ಮಾಡಿದ್ದಾನೆ. ಏಪ್ರಿಲ್ 17ರಂದು ಈತನ ವಿರುದ್ಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

See also  ಕಲ್ಲಾಪು: ಸ್ಕೂಟಿ ಚಕ್ರಕ್ಕೆ ಸಿಲುಕಿಕೊಂಡ ಸೀರೆಯ ಸೆರಗು..! ರಸ್ತೆಗೆಸೆಯಲ್ಪಟ್ಟು ಮಹಿಳೆ ದಾರುಣ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget